ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
IPL 2025: ಚೊಚ್ಚಲ ಐಪಿಎಲ್ ಆಡುತ್ತಿರುವ ಈ 8 ಆಟಗಾರರ ಸಾಮರ್ಥ್ಯ ಏನು ಎಂಬುದು ತಿಳಿದಿರಲಿ
IPL 2025 new players: 18ನೇ ಆವೃತ್ತಿಯ ಐಪಿಎಲ್ ಲೀಗ್ ಶೀಘ್ರದಲ್ಲಿ ಆರಂಭವಾಗಲಿದೆ. ಈ ಸೀಸನ್ನಲ್ಲಿ ಅನೇಕ ಯುವ ಆಟಗಾರರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಅದರಲ್ಲೂ ಭಾರತ ಮತ್ತು ವಿದೇಶಗಳಿಂದ ಆಯ್ಕೆಯಾದ ಈ ಎಂಟು ಯುವ ಆಟಗಾರರು ತಮ್ಮ ಚೊಚ್ಚಲ ಐಪಿಎಲ್ ಆಡುತ್ತಿದ್ದು, ಇದೀಗ ಎಲ್ಲರ ಗಮನ ಅವರ ಮೇಲಿದೆ.
- pruthvi Shankar
- Updated on: Mar 21, 2025
- 6:09 pm
IPL 2025: 17 ವರ್ಷಗಳ ಬಳಿಕ ಆರ್ಸಿಬಿ- ಕೆಕೆಆರ್ ಫಸ್ಟ್ ಫೈಟ್; ಮರುಕಳಿಸುತ್ತಾ ಇತಿಹಾಸ? ತಿರುಗೇಟು ನೀಡುತ್ತಾ ಆರ್ಸಿಬಿ?
IPL 2025 Opener: 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವ ಈ ಎರಡೂ ತಂಡಗಳು ಬಲಿಷ್ಠವಾಗಿ ಕಾಣುತ್ತಿವೆ. ಕೆಕೆಆರ್ ತಂಡದಲ್ಲಿ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿದರೆ, ಆರ್ಸಿಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಸಂಯೋಜನೆಯನ್ನು ಹೊಂದಿರುವ ಈ ತಂಡಗಳು ರೋಮಾಂಚಕ ಪಂದ್ಯವನ್ನು ನೀಡುವ ನಿರೀಕ್ಷೆಯಿದೆ.
- pruthvi Shankar
- Updated on: Mar 21, 2025
- 5:16 pm
IPL 2025: ‘ಅಂಕಿಅಂಶಗಳೇ ಎಲ್ಲವನ್ನೂ ಹೇಳುತ್ತವೆ’; ರೋಹಿತ್ಗೆ ತಿರುಗೇಟು ನೀಡಿದ ಮೊಹಮ್ಮದ್ ಸಿರಾಜ್
Mohammed Siraj's Snippy Reply to Rohit Sharma: ಭಾರತ ತಂಡದಿಂದ ಕೈಬಿಡಲ್ಪಟ್ಟ ಮೊಹಮ್ಮದ್ ಸಿರಾಜ್ ಅವರು ರೋಹಿತ್ ಶರ್ಮಾ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹಳೆಯ ಚೆಂಡಿನಲ್ಲಿ ಪರಿಣಾಮಕಾರಿಯಲ್ಲ ಎಂಬ ರೋಹಿತ್ ಅವರ ಆರೋಪಕ್ಕೆ ಸಿರಾಜ್ ಅವರು ತಮ್ಮ ಅಂಕಿಅಂಶಗಳನ್ನು ತೋರಿಸಿ ತಮ್ಮ ಪ್ರತಿಭೆಯನ್ನು ಸಮರ್ಥಿಸಿಕೊಂಡಿದ್ದಾರೆ. ಐಪಿಎಲ್ 2025ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಲು ಸಿರಾಜ್ ಸಿದ್ಧರಾಗಿದ್ದಾರೆ.
- pruthvi Shankar
- Updated on: Mar 21, 2025
- 4:17 pm
PAK vs NZ: ಕಿವೀಸ್ ವಿರುದ್ಧ ಕೊನೆಗೂ ಗೆದ್ದು ಮಾನ ಉಳಿಸಿಕೊಂಡ ಪಾಕಿಸ್ತಾನ
Pakistan Stuns New Zealand: ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಹಸನ್ ನವಾಜ್ ಅವರ ಅದ್ಭುತ ಶತಕದಿಂದಾಗಿ ಪಾಕಿಸ್ತಾನ 9 ವಿಕೆಟ್ಗಳಿಂದ ಜಯಭೇರಿ ಬಾರಿಸಿದೆ. ನ್ಯೂಜಿಲೆಂಡ್ ನೀಡಿದ 205 ರನ್ಗಳ ಗುರಿಯನ್ನು ಪಾಕಿಸ್ತಾನ ಸುಲಭವಾಗಿ ಬೆನ್ನಟ್ಟಿತು. ನವಾಜ್ ಹೊರತಾಗಿ ಮೊಹಮ್ಮದ್ ಹ್ಯಾರಿಸ್ ಮತ್ತು ಸಲ್ಮಾನ್ ಅಗಾ ಕೂಡ ಉತ್ತಮ ಪ್ರದರ್ಶನ ನೀಡಿದರು.
- pruthvi Shankar
- Updated on: Mar 21, 2025
- 3:29 pm
IPL 2025: ನಾಯಕರ ನಿಷೇಧ ರದ್ದು; ಸಿಎಸ್ಕೆ ವಿರುದ್ಧ ಆಡ್ತಾರಾ ಹಾರ್ದಿಕ್ ಪಾಂಡ್ಯ?
BCCI Alters Slow Over Rate Rule for IPL 2025: ಬಿಸಿಸಿಐ, 2025 ರ ಐಪಿಎಲ್ ಆರಂಭಕ್ಕೂ ಮುನ್ನ ನಿಧಾನಗತಿಯ ಓವರ್ ರೇಟ್ ನಿಯಮದಲ್ಲಿ ಬದಲಾವಣೆ ಮಾಡಿದೆ. ಮೊದಲು ನಾಯಕರನ್ನು ಪಂದ್ಯದಿಂದ ನಿಷೇಧಿಸಲಾಗುತ್ತಿತ್ತು, ಆದರೆ ಈಗ ದಂಡ ಮತ್ತು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಹಾರ್ದಿಕ್ ಪಾಂಡ್ಯ ಕಳೆದ ಸೀಸನ್ ನಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ಶಿಕ್ಷೆ ಅನುಭವಿಸಬೇಕಾಗಿದೆ, ಆದರೆ ಹೊಸ ನಿಯಮ ಈ ಸೀಸನ್ ನಿಂದ ಜಾರಿಯಲ್ಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ನಿಯಮಗಳಿಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ.
- pruthvi Shankar
- Updated on: Mar 21, 2025
- 2:57 pm
IPL 2025: ನಾಯಕರ ನಿಷೇಧಕ್ಕೆ ಬ್ರೇಕ್ ಹಾಕಿ ನೇರವಾಗಿ ಅವರ ಖಜಾನೆಗೆ ಕೈ ಹಾಕಿದ ಬಿಸಿಸಿಐ
IPL 2025: 2025ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಇರುವುದಿಲ್ಲ. ನಿಧಾನಗತಿಯ ಓವರ್ ರೇಟ್ ನಿಯಮ ಉಲ್ಲಂಘನೆಗಾಗಿ ಅವರಿಗೆ ನಿಷೇಧ ವಿಧಿಸಲಾಗಿತ್ತು. ಆದರೆ ಈಗ ಬಿಸಿಸಿಐ ಈ ನಿಯಮವನ್ನು ರದ್ದುಗೊಳಿಸಿದೆ. ನಾಯಕನನ್ನು ಪಂದ್ಯದಿಂದ ನಿಷೇಧಿಸುವ ಬದಲಾಗಿ ಆತನ ಪಂದ್ಯ ಶುಲ್ಕವನ್ನು ಕಡಿತಗೊಳಿಸುವ ಹಾಗೂ ಡಿಮೆರಿಟ್ ಅಂಕಗಳನ್ನು ನೀಡುವ ನಿಯಮವನ್ನು ಜಾರಿಗೆ ತಂದಿದೆ.
- pruthvi Shankar
- Updated on: Mar 20, 2025
- 10:34 pm
ಐಪಿಎಲ್ ಆರಂಭಕ್ಕೂ ಮುನ್ನವೇ ವೇಳಾಪಟ್ಟಿ ಬದಲಾವಣೆ; ಕೊಲ್ಕತ್ತಾದಿಂದ ಗುವಾಹಟಿಗೆ ಪಂದ್ಯ ಶಿಫ್ಟ್
IPL 2025 Schedule Change: 2025ರ ಐಪಿಎಲ್ನ 18ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಮೊದಲು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು, ರಾಮನವಮಿ ಆಚರಣೆಯಿಂದಾಗಿ ಭದ್ರತಾ ಕಾರಣಗಳಿಗಾಗಿ ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ಈ ಬದಲಾವಣೆಯಿಂದ ಬಂಗಾಳ ಕ್ರಿಕೆಟ್ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಲಿದೆ. ಅಸ್ಸಾಂ ಕ್ರಿಕೆಟ್ ಸಂಸ್ಥೆ ಪಂದ್ಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದೆ.
- pruthvi Shankar
- Updated on: Mar 20, 2025
- 9:34 pm
ಐಪಿಎಲ್ನಿಂದ ಅತಿ ಹೆಚ್ಚು ಹಣ ಸಂಪಾದಿಸಿದ ಟಾಪ್ 10 ಆಟಗಾರರಿವರು
ಐಪಿಎಲ್ನಿಂದ ಅತಿ ಹೆಚ್ಚು ಹಣ ಸಂಪಾದಿಸಿದ ಟಾಪ್ 10 ಆಟಗಾರರಿವರು
- pruthvi Shankar
- Updated on: Mar 20, 2025
- 8:54 pm
IPL 2025: ಹರಾಜಿನಲ್ಲಿ ಪಡೆದ ಹಣದ ಜೊತೆಗೆ ಪ್ರತಿ ಪಂದ್ಯಕ್ಕೂ 7.5 ಲಕ್ಷ ರೂ. ವೇತನ..!
BCCI's IPL 2025 Bonanza: ಬಿಸಿಸಿಐ 2025ರ ಐಪಿಎಲ್ನಲ್ಲಿ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿಗಳನ್ನು ಪಂದ್ಯ ಶುಲ್ಕವಾಗಿ ನೀಡುವುದಾಗಿ ಘೋಷಿಸಿದೆ. ಇದು ಹರಾಜಿನಲ್ಲಿ ಪಡೆದ ಮೊತ್ತಕ್ಕೆ ಹೆಚ್ಚುವರಿಯಾಗಿದೆ. ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿಸಲ್ಪಟ್ಟ ಆಟಗಾರರಿಗೆ ಇದು ಉಪಯುಕ್ತವಾಗಲಿದೆ. ಇದರ ಜೊತೆಗೆ ರಾತ್ರಿ ಪಂದ್ಯಗಳಲ್ಲಿ ಎರಡು ಹೊಸ ಚೆಂಡುಗಳು ಮತ್ತು ಬೌಲರ್ಗಳಿಗೆ ಎಂಜಲು ಲೇಪನ ಮಾಡಲು ಅನುಮತಿ ಕೂಡ ನೀಡಲಾಗಿದೆ.
- pruthvi Shankar
- Updated on: Mar 20, 2025
- 8:03 pm
BCCI: ಬಿಸಿಸಿಐ ನೀಡಿರುವ 58 ಕೋಟಿ ಬಹುಮಾನದಲ್ಲಿ ಯಾರಿಗೆ ಎಷ್ಟೆಷ್ಟು?
58 Crore Prize for India's Champions Trophy Win: ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಕ್ಕಾಗಿ ಬಿಸಿಸಿಐ 58 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ. ಪ್ರತಿ ಆಟಗಾರನಿಗೆ 3 ಕೋಟಿ ರೂಪಾಯಿಗಳು, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ 3 ಕೋಟಿ ರೂಪಾಯಿಗಳು ಮತ್ತು ಇತರ ಸಿಬ್ಬಂದಿಗೆ ವಿಭಿನ್ನ ಮೊತ್ತವನ್ನು ನೀಡಲಾಗುವುದು. ಐಸಿಸಿಯಿಂದ ಬರುವ 20 ಕೋಟಿ ರೂಪಾಯಿಗಳ ಬಹುಮಾನವನ್ನು ಆಟಗಾರರಿಗೆ ಮಾತ್ರ ಹಂಚಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
- pruthvi Shankar
- Updated on: Mar 20, 2025
- 7:04 pm
Chahal-Dhanashree Divorce: ಚಾಹಲ್- ಧನಶ್ರೀ ವೈವಾಹಿಕ ಜೀವನ ಅಂತ್ಯ; ಅಧಿಕೃತ ಮುದ್ರೆ ಒತ್ತಿದ ನ್ಯಾಯಾಲಯ
Chahal-Dhanashree Divorce: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯವು ವಿಚ್ಛೇದನಕ್ಕೆ ಅನುಮತಿ ನೀಡಿದೆ. ಚಾಹಲ್ ಅವರು ಧನಶ್ರೀ ಅವರಿಗೆ 4.75 ಕೋಟಿ ರೂಪಾಯಿಗಳ ಜೀವನಾಂಶವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಬ್ಬರೂ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಕಾರಣ ಹೈಕೋರ್ಟ್ ಅವರಿಬ್ಬರಿಗೂ ಕೂಲಿಂಗ್-ಆಫ್ನಿಂದ ವಿನಾಯಿತಿ ನೀಡಿತ್ತು.
- pruthvi Shankar
- Updated on: Mar 20, 2025
- 5:44 pm
IPL 2025: ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ಬ್ರೇಕ್ ಹಾಕಿ ಬೌಲರ್ಗಳ ಬೆನ್ನಿಗೆ ನಿಂತ ಬಿಸಿಸಿಐ
BCCI Introduces Two-Ball Rule in IPL: ಬಿಸಿಸಿಐ ಐಪಿಎಲ್ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾತ್ರಿ ಪಂದ್ಯಗಳ ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಎರಡು ಚೆಂಡುಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಇದು ಇಬ್ಬನಿಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಟಾಸ್ ಗೆದ್ದ ತಂಡಕ್ಕೆ ಆಗುವ ಅನುಕೂಲವನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ. 11ನೇ ಓವರ್ ನಂತರ ಎರಡನೇ ಚೆಂಡನ್ನು ಬಳಸಬಹುದು. ಆದರೆ ಎರಡೂ ಹೊಸ ಚೆಂಡುಗಳಾಗಿರುತ್ತವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಿಯಮವು ರಾತ್ರಿ ಪಂದ್ಯಗಳಿಗೆ ಮಾತ್ರ ಅನ್ವಯವಾಗುತ್ತದೆ.
- pruthvi Shankar
- Updated on: Mar 20, 2025
- 4:50 pm