ಪಾತಕಿಗಳಿಗೆ ಇನ್ನೂ ಅಂತ್ಯಸಂಸ್ಕಾರದ ಭಾಗ್ಯವಿಲ್ಲ, ವಿಚಾರಣೆ ಪೋಸ್ಟ್​ಪೋನ್

ಹೈದರಾಬಾದ್: ಪಶುವೈದ್ಯೆ ದಿಶಾಳ ಸಾಮೂಹಿಕ ಅತ್ಯಾಚಾರ, ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಅದರ ಪ್ರತಿ ಉತ್ತರವಾಗಿ ದುರ್ಜನರನ್ನು ಮಟ್ಟ ಹಾಕಲು ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನ್ ನಾಲ್ವರೂ ಅತ್ಯಾಚಾರಿ-ಹಂತಕ ಆರೋಪಿಗಳನ್ನು ಎನ್ಕೌಂಟರ್​ ಮಾಡಿದ್ದರು. ಈ ಪ್ರಕರಣ ವಿಚಾರಣೆ ತೆಲಂಗಾಣ ಕೋರ್ಟ್​ನಲ್ಲಿ ನಡೆಯಿತಾದರೂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.  ಹಾಗಾಗಿ ಆರೋಪಿಗಳ ಮೃತದೇಹವನ್ನ ಮೆಹಬೂಬ ನಗರದಿಂದ ಗಾಂಧಿ ಆಸ್ಪತ್ರೆಗೆ ಸಾಗಿಸಿ, ಸಂರಕ್ಷಿಸಿಡಲು ಆದೇಶ ನೀಡಿದೆ. ಕೋರ್ಟ್ ಆದೇಶದಂತೆ  ಆ್ಯಂಬುಲೆನ್ಸ್​ನಲ್ಲಿ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಪಾಪಿ […]

ಪಾತಕಿಗಳಿಗೆ ಇನ್ನೂ ಅಂತ್ಯಸಂಸ್ಕಾರದ ಭಾಗ್ಯವಿಲ್ಲ, ವಿಚಾರಣೆ ಪೋಸ್ಟ್​ಪೋನ್
ಸಾಧು ಶ್ರೀನಾಥ್​

Updated on: Dec 09, 2019 | 4:35 PM

ಹೈದರಾಬಾದ್: ಪಶುವೈದ್ಯೆ ದಿಶಾಳ ಸಾಮೂಹಿಕ ಅತ್ಯಾಚಾರ, ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಅದರ ಪ್ರತಿ ಉತ್ತರವಾಗಿ ದುರ್ಜನರನ್ನು ಮಟ್ಟ ಹಾಕಲು ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನ್ ನಾಲ್ವರೂ ಅತ್ಯಾಚಾರಿ-ಹಂತಕ ಆರೋಪಿಗಳನ್ನು ಎನ್ಕೌಂಟರ್​ ಮಾಡಿದ್ದರು.

ಈ ಪ್ರಕರಣ ವಿಚಾರಣೆ ತೆಲಂಗಾಣ ಕೋರ್ಟ್​ನಲ್ಲಿ ನಡೆಯಿತಾದರೂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.  ಹಾಗಾಗಿ ಆರೋಪಿಗಳ ಮೃತದೇಹವನ್ನ ಮೆಹಬೂಬ ನಗರದಿಂದ ಗಾಂಧಿ ಆಸ್ಪತ್ರೆಗೆ ಸಾಗಿಸಿ, ಸಂರಕ್ಷಿಸಿಡಲು ಆದೇಶ ನೀಡಿದೆ. ಕೋರ್ಟ್ ಆದೇಶದಂತೆ  ಆ್ಯಂಬುಲೆನ್ಸ್​ನಲ್ಲಿ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಪಾಪಿ ಆರೋಪಿಗಳ ದೇಹ ಮಣ್ಣು ಸೇರದೆ ಇನ್ನೂ ಹಾಗೆಯೇ ಇದೆ.

Published On - 4:18 pm, Mon, 9 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us