ಪಾತಕಿಗಳಿಗೆ ಇನ್ನೂ ಅಂತ್ಯಸಂಸ್ಕಾರದ ಭಾಗ್ಯವಿಲ್ಲ, ವಿಚಾರಣೆ ಪೋಸ್ಟ್​ಪೋನ್

ಹೈದರಾಬಾದ್: ಪಶುವೈದ್ಯೆ ದಿಶಾಳ ಸಾಮೂಹಿಕ ಅತ್ಯಾಚಾರ, ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಅದರ ಪ್ರತಿ ಉತ್ತರವಾಗಿ ದುರ್ಜನರನ್ನು ಮಟ್ಟ ಹಾಕಲು ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನ್ ನಾಲ್ವರೂ ಅತ್ಯಾಚಾರಿ-ಹಂತಕ ಆರೋಪಿಗಳನ್ನು ಎನ್ಕೌಂಟರ್​ ಮಾಡಿದ್ದರು. ಈ ಪ್ರಕರಣ ವಿಚಾರಣೆ ತೆಲಂಗಾಣ ಕೋರ್ಟ್​ನಲ್ಲಿ ನಡೆಯಿತಾದರೂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.  ಹಾಗಾಗಿ ಆರೋಪಿಗಳ ಮೃತದೇಹವನ್ನ ಮೆಹಬೂಬ ನಗರದಿಂದ ಗಾಂಧಿ ಆಸ್ಪತ್ರೆಗೆ ಸಾಗಿಸಿ, ಸಂರಕ್ಷಿಸಿಡಲು ಆದೇಶ ನೀಡಿದೆ. ಕೋರ್ಟ್ ಆದೇಶದಂತೆ  ಆ್ಯಂಬುಲೆನ್ಸ್​ನಲ್ಲಿ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಪಾಪಿ […]

ಪಾತಕಿಗಳಿಗೆ ಇನ್ನೂ ಅಂತ್ಯಸಂಸ್ಕಾರದ ಭಾಗ್ಯವಿಲ್ಲ, ವಿಚಾರಣೆ ಪೋಸ್ಟ್​ಪೋನ್

Updated on: Dec 09, 2019 | 4:35 PM

ಹೈದರಾಬಾದ್: ಪಶುವೈದ್ಯೆ ದಿಶಾಳ ಸಾಮೂಹಿಕ ಅತ್ಯಾಚಾರ, ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು. ಅದರ ಪ್ರತಿ ಉತ್ತರವಾಗಿ ದುರ್ಜನರನ್ನು ಮಟ್ಟ ಹಾಕಲು ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನ್ ನಾಲ್ವರೂ ಅತ್ಯಾಚಾರಿ-ಹಂತಕ ಆರೋಪಿಗಳನ್ನು ಎನ್ಕೌಂಟರ್​ ಮಾಡಿದ್ದರು.

ಈ ಪ್ರಕರಣ ವಿಚಾರಣೆ ತೆಲಂಗಾಣ ಕೋರ್ಟ್​ನಲ್ಲಿ ನಡೆಯಿತಾದರೂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.  ಹಾಗಾಗಿ ಆರೋಪಿಗಳ ಮೃತದೇಹವನ್ನ ಮೆಹಬೂಬ ನಗರದಿಂದ ಗಾಂಧಿ ಆಸ್ಪತ್ರೆಗೆ ಸಾಗಿಸಿ, ಸಂರಕ್ಷಿಸಿಡಲು ಆದೇಶ ನೀಡಿದೆ. ಕೋರ್ಟ್ ಆದೇಶದಂತೆ  ಆ್ಯಂಬುಲೆನ್ಸ್​ನಲ್ಲಿ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೀಗಾಗಿ ಪಾಪಿ ಆರೋಪಿಗಳ ದೇಹ ಮಣ್ಣು ಸೇರದೆ ಇನ್ನೂ ಹಾಗೆಯೇ ಇದೆ.

Published On - 4:18 pm, Mon, 9 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us