
ವಾಷಿಂಗ್ಟನ್: ಶ್ವೇತ ಭವನದಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಆಚರಿಸಲಾಗಿದೆ. ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮಭಟ್ರಿಂದ ವೇದಮಂತ್ರ, ಯಜುರ್ವೇದದ ಮಂತ್ರ ಪಠಣ ನಡೆಯಿತು.
ಭಾರತದ ಸ್ವಾಮಿ ನಾರಾಯಣ ಪಂಥದ ರಾಮಭಟ್ ಅಮೆರಿಕ ಅಧ್ಯಕ್ಷ ಟ್ರಂಪ್ ಸಮ್ಮುಖದಲ್ಲಿ ಮಂತ್ರ ಪಠಣ ಮಾಡಿದರು. ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಭೂಮಿ,ಆಗಸ, ನೀರು, ಗಿಡ-ಮರ, ಕಾಡು ಸೇರಿದಂತೆ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ನಡೆಯಿತು. ಈಗ ಕೊರೊನಾ ಸಂಕಷ್ಟ ಕಾಲದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕರಾರುವಕ್ಕಾಗಿ ಪಾಲಿಸಲಾಗಿತ್ತು.
Published On - 4:52 pm, Fri, 8 May 20