ಶ್ವೇತ ಭವನದಲ್ಲಿ ಟ್ರಂಪ್‌ ಸಮ್ಮುಖದಲ್ಲಿ ಮಂತ್ರ ಪಠಣ! ಉದ್ದೇಶ ಏನು?

ವಾಷಿಂಗ್ಟನ್: ಶ್ವೇತ ಭವನದಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಆಚರಿಸಲಾಗಿದೆ. ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮಭಟ್‌ರಿಂದ ವೇದಮಂತ್ರ, ಯಜುರ್ವೇದದ ಮಂತ್ರ ಪಠಣ ನಡೆಯಿತು. ಭಾರತದ ಸ್ವಾಮಿ ನಾರಾಯಣ ಪಂಥದ ರಾಮಭಟ್ ಅಮೆರಿಕ ಅಧ್ಯಕ್ಷ ಟ್ರಂಪ್‌ ಸಮ್ಮುಖದಲ್ಲಿ ಮಂತ್ರ ಪಠಣ ಮಾಡಿದರು. ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಭೂಮಿ,ಆಗಸ, ನೀರು, ಗಿಡ-ಮರ, ಕಾಡು ಸೇರಿದಂತೆ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ನಡೆಯಿತು. ಈಗ ಕೊರೊನಾ ಸಂಕಷ್ಟ ಕಾಲದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕರಾರುವಕ್ಕಾಗಿ ಪಾಲಿಸಲಾಗಿತ್ತು.

ಶ್ವೇತ ಭವನದಲ್ಲಿ ಟ್ರಂಪ್‌ ಸಮ್ಮುಖದಲ್ಲಿ ಮಂತ್ರ ಪಠಣ! ಉದ್ದೇಶ ಏನು?
ಸಾಧು ಶ್ರೀನಾಥ್​

Updated on: May 08, 2020 | 5:00 PM

ವಾಷಿಂಗ್ಟನ್: ಶ್ವೇತ ಭವನದಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಆಚರಿಸಲಾಗಿದೆ. ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ರಾಮಭಟ್‌ರಿಂದ ವೇದಮಂತ್ರ, ಯಜುರ್ವೇದದ ಮಂತ್ರ ಪಠಣ ನಡೆಯಿತು.

ಭಾರತದ ಸ್ವಾಮಿ ನಾರಾಯಣ ಪಂಥದ ರಾಮಭಟ್ ಅಮೆರಿಕ ಅಧ್ಯಕ್ಷ ಟ್ರಂಪ್‌ ಸಮ್ಮುಖದಲ್ಲಿ ಮಂತ್ರ ಪಠಣ ಮಾಡಿದರು. ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಭೂಮಿ,ಆಗಸ, ನೀರು, ಗಿಡ-ಮರ, ಕಾಡು ಸೇರಿದಂತೆ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ನಡೆಯಿತು. ಈಗ ಕೊರೊನಾ ಸಂಕಷ್ಟ ಕಾಲದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕರಾರುವಕ್ಕಾಗಿ ಪಾಲಿಸಲಾಗಿತ್ತು.

Published On - 4:52 pm, Fri, 8 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us