5 ಗ್ಯಾರೆಂಟಿಗಳು ಮತ್ತೊಮ್ಮೆ ಜಾರಿಗೆ ? ಈ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತುಗಳು ಇಲ್ಲಿದೆ

|

Updated on: May 21, 2023 | 3:08 PM

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿಜನರ ಭರವಸೆ ಹುಸಿಯಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಟೀಕೆಗೆ ತಿರುಗೇಟು ನೀಡಿದರು.

ನಾವು ಮುಂದಿನ ಕ್ಯಾಬಿನೆಟ್​ನಲ್ಲಿ ಈ 5 ಗ್ಯಾರೆಂಟಿಗಳನ್ನು ಮತ್ತೊಮ್ಮೆ ಸ್ವೀಕರಿಸಿ ಆದೇಶ ಹೊರಡಿಸಿ ಅವತ್ತಿಂದ ಜಾರಿಗೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಾಹಿತಿ ಸಂಗ್ರಹಿಸಲು ಹೇಳಿದ್ದೇನೆ. ಮಾಹಿತಿ ಬಂದ ಮೇಲೆ ಪರಿಶೀಲಿಸಿ ಜಾರಿಗೆ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ಹೇಳಿದಂತ ಎಲ್ಲ ಭರವಸೆಗಳನ್ನು ಕೂಡ ಅಂದೇ ಜಾರಿಗೆ ಮಾಡುತ್ತೇವೆ ಎಂದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿಜನರ ಭರವಸೆ ಹುಸಿಯಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಟೀಕೆಗೆ ತಿರುಗೇಟು ನೀಡಿದರು.

Follow us on