Karnataka Assembly Polls: ಮಾಕೋನಹಳ್ಳಿಯ ವಧು ಪ್ರದರ್ಶಿಸಿರುವ ಬದ್ಧತೆ ಎಲ್ಲರಲ್ಲೂ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಗಟ್ಟಿಯಾಗುತ್ತದೆ!

Updated on: May 10, 2023 | 11:45 AM

ಚಿತ್ರನಟಿ ಸೌಂದರ್ಯಳಂತೆ ಕಾಣುವ ಮಾಕೋಮಹಳ್ಳಿಯ ಸುಂದರ ಮದುಮಗಳು ತೋರಿದ ಬದ್ಧತೆ ಎಲ್ಲರಲ್ಲೂ ಬಂದರೆ ಎಷ್ಟು ಚೆನ್ನ!

ಚಿಕ್ಕಮಗಳೂರು: ಈ ಸುಂದರ ಯುವತಿಯ ಸಾಮಾಜಿಕ ಬದ್ಧತೆಯನ್ನು (social commitment) ಮೆಚ್ಚಿ ಅಭಿನಂದಿಸಲೇಬೇಕು ಮಾರಾಯ್ರೇ. ನಮ್ಮಲ್ಲಿ ಬಹಳ ಜನಕ್ಕೆ ಮತದಾನ ಮಾಡುವುದು ಅಂದರೆ ಒಂದು ಪರ್ವತ ಹೊತ್ತು ಹಾಗೆ. ಮನೇಲಿ ಬಿದ್ದುಕೊಂಡಿರುತ್ತಾರೆಯೇ ಹೊರತು ಒಂದೈವತ್ತು ಗಜದಷ್ಟು ದೂರವಿರುವ ಮತಗಟ್ಟೆಗೆ ಹೋಗಿ ವೋಟು ಹಾಕಲಾರರು. ಆದರೆ, ಜಿಲ್ಲೆಯು ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ (Makonahalli) ಹೆಸರಿನ ಗ್ರಾಮದಲ್ಲಿ ಮದುಮಗಳೊಬ್ಬರು (bride) ಮದುವೆ ಚಪ್ಪರಕ್ಕೆ ಹೋಗುವ ಮೊದಲು ಮತಗಟ್ಟೆಗೆ ಹೋಗಿ ಮಾತದಾನ ಮಾಡಿದ್ದಾರೆ. ಮತದಾನಕ್ಕೆ ಸಂಬಂಧಿಸಿದಂತೆ ಪ್ರತಿ ಅರ್ಹ ಮತದಾರ ಇಂಥ ಸಂಕಲ್ಪ, ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ (democratic setup) ಮತ್ತಷ್ಟು ಸುಂದರವೆನಿಸಿಕೊಳ್ಳುತ್ತದೆ. ಚಿತ್ರನಟಿ ಸೌಂದರ್ಯಳಂತೆ ಕಾಣುವ ಮಾಕೋಮಹಳ್ಳಿಯ ಸುಂದರ ಮದುಮಗಳಿಗೆ ನಮ್ಮದೊಂದು ಸಲಾಂ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More