Karnataka Assembly Polls: ಮಂಡ್ಯದ ನಾಯಿಯೊಂದರ ಪ್ರಕಾರ ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Apr 25, 2023 | 6:00 PM

ಪೋಟೋ ಎತ್ಕೊಂಡು ಬಾ ಅಂದ ಕೂಡಲೇ ನಾಯಿ ದೇವರ ಕೋಣೆಗೆ ನುಗ್ಗಿ ಅಲ್ಲಿ ಥರ್ಮೋಕೋಲ್ ಗೆ ಅಂಟಿಸಿದ ಮೂರು ಫೋಟೋಗಳ ಪೈಕಿ ಕುಮಾರಸ್ವಾಮಿಯವರ ಫೋಟೋ ಬಾಯಲ್ಲಿ ಹಿಡಿದುಕೊಂಡು ಬರುತ್ತದೆ

ಮಂಡ್ಯ:  ಮುಂದಿನ ಮುಖ್ಯಮಂತ್ರಿ ಯಾರು ಅಂತ ನಿರ್ಧರಿತವಾಗಿದೆ ಮಾರಾಯ್ರೇ. ಮಂಡ್ಯದ ಈ ನಾಯಿಯ (dog) ಪ್ರಕಾರ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ನಾಯಿಯನ್ನು ಸಾಕಿದವರು ಕುಮಾರಸ್ವಾಮಿಯವರ ಬೆಂಬಲಿಗರಿರಬೇಕು. ಯಾಕೆಂದರೆ ಇದಕ್ಕೂ ಮೊದಲು ಯಾವತ್ತಾದರೂ ನಾಯಿ ಭವಿಷ್ಯ ನುಡಿದಿದ್ದನ್ನು ಕೇಳಿದ್ದೀರಾ? ಮನೆಯ ಮಾಲೀಕರು ಯಾವುದಾದರೂ ಒಂದು ಪೋಟೋ (photo) ಎತ್ಕೊಂಡು ಬಾ ಅಂದ ಕೂಡಲೇ ನಾಯಿ ದೇವರ ಕೋಣೆಗೆ ನುಗ್ಗಿ ಅಲ್ಲಿ ಥರ್ಮೋಕೋಲ್ ಗೆ ಅಂಟಿಸಿದ ಮೂರು ಫೋಟೋಗಳ ಪೈಕಿ ಕುಮಾರಸ್ವಾಮಿಯವರ ಫೋಟೋ ಬಾಯಲ್ಲಿ ಹಿಡಿದುಕೊಂಡು ಬರುತ್ತದೆ. ಉಳಿದ ಎರಡು ಫೋಟೋಗಳಲ್ಲಿ ಯಾರಿದ್ದರು ಅಂತ ಗೊತ್ತಿಲ್ಲ. ಮನೆಯ ಮಾಲೀಕರು ಮುಖ್ಯಮಂತ್ರಿ ಯಾರು ಅಂತ ನಾಯಿಗೆ ಕೇಳೋದಿಲ್ಲ, ಒಂದು ಪೋಟೋ ಎತ್ಕೊಂಡು ಬಾ ಅಂದಾಕ್ಷಣ ಅದು ಬಲಭಾಗದ ಕೊನೆಯಲ್ಲಿದ್ದ ಪೋಟೋ ಎತ್ತಿಕೊಂಡು ಬರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.