ನನ್ನ 91 ನೇ ಇಳಿವಯಸ್ಸಿನಲ್ಲಿ ಕರ್ನಾಟಕದ ಜನತೆಯನ್ನು ಉಳಿಸಲು ಹೋರಾಡುತ್ತಿದ್ದೇನೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Sep 25, 2023 | 3:04 PM

ಪತ್ರದ ಪ್ರತಿಯೊಂದನ್ನು ಹಿಡಿದು ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿದ ಹಿರಿಯ ಮುತ್ಸದ್ದಿ ತಾವು ಕಾವೇರಿ ಮಾತ್ರವಲ್ಲ ಮಹಾದಾಯಿ ನೀರಿಗಾಗಿ ಸಂಸತ್ತಿನ ಒಳಗೆ ಮತ್ತು ಹೊರಗಡೆ ನಡೆಸಿದ ಹೋರಾಟವನ್ನು ಪತ್ರಕರ್ತರಿಗೆ ಹೇಳುವಾಗ ತೀವ್ರ ಭಾವುಕರಾದರು. ಜೆಡಿಎಸ್ ಪಕ್ಷದ ಉದ್ದೇಶ ಅಧಿಕಾರಕ್ಕೆ ಬರೋದು, ಸರ್ಕಾರ ರಚಿಸೋದು ಅಲ್ಲ ಎಂದು ಅವರು ಹೇಳಿದರು.

ದಾವಣಗೆರೆ: ಕಾವೇರಿ ನದಿ ನೀರು ಹಂಚಿಕೆ (Cauvery River water distribution) ಬಿಕ್ಕಟ್ಟು ಪರಾಕಷ್ಠೆ ತಲುಪಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (former PM HD Devegowda) ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಪತ್ರವೊಂದನ್ನು ಬರೆದು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ. ಪತ್ರದ ಪ್ರತಿಯೊಂದನ್ನು ಹಿಡಿದು ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿದ ಹಿರಿಯ ಮುತ್ಸದ್ದಿ ತಾವು ಕಾವೇರಿ ಮಾತ್ರವಲ್ಲ ಮಹಾದಾಯಿ ನೀರಿಗಾಗಿ ಸಂಸತ್ತಿನ ಒಳಗೆ ಮತ್ತು ಹೊರಗಡೆ ನಡೆಸಿದ ಹೋರಾಟವನ್ನು ಪತ್ರಕರ್ತರಿಗೆ ಹೇಳುವಾಗ ತೀವ್ರ ಭಾವುಕರಾದರು. ಜೆಡಿಎಸ್ ಪಕ್ಷದ ಉದ್ದೇಶ ಅಧಿಕಾರಕ್ಕೆ ಬರೋದು, ಸರ್ಕಾರ ರಚಿಸೋದು ಅಲ್ಲ, ತಾನು 91 ನೇ ವಯಸ್ಸಿನಲ್ಲಿ ಹೋರಾಟ ಮಾಡುತ್ತಿರೋದು ಕರ್ನಾಟಕದ ಜನತೆಯನ್ನು ಉಳಿಸಲು ಎಂದು ಹೇಳುವಾಗ ಗೌಡರು ಭಾವೋದ್ರಿಕ್ತರಾದರು. ತಮಿಳುನಾಡು ರಾಜ್ಯದ ರೈತರು ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ, ಅದರೆ ಕನ್ನಡದ ರೈತರು ಕೇವಲ ಒಂದು ಬೆಳೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೇವೇಗೌಡ ಹೇಳಿದರು. ಅವರ ಧ್ವನಿ ಗದ್ಗದಿತಗೊಂಡಿದ್ದರಿಂದ ಕೆಲ ಮಾತುಗಳು ಬಾಯಲ್ಲೇ ಉಳಿದುಬಿಟ್ಟವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.