Gruhalakshmi Guarantee: ಸರ್ಕಾರ ರೂ. 2,000 ಕೊಡೋದಾದ್ರೆ ಅತ್ತೆಗೂ ಕೊಡಲಿ ಸೊಸೆಗೂ ಕೊಡಲಿ! ಬೆಳಗಾವಿ ಮಹಿಳೆಯರು

Updated on: Jun 07, 2023 | 7:31 PM

ಸೊಸೆಗಳ ಜೊತೆ ಜಗಳ ಮಾಡುತ್ತಾ ಕೂರಲಾಗದು, ಕೊಡೋದಾದರೆ ಇಬ್ಬರಿಗೂ ಕೊಡಲಿ ಅಂತ ಅತ್ತೆಗಳು ಹೇಳುತ್ತಿದ್ದಾರೆ.

ಬೆಳಗಾವಿ: ಕಾಂಗ್ರೆಸ್ ಘೋಷಿಸಿರುವ ಗೃಹಲಕ್ಷ್ಮಿ ಗ್ಯಾರಂಟಿ (Gruhalakshmi Scheme) ಅತ್ತೆ ಸೊಸೆಯರ ನಡುವೆ ಜಗಳಕ್ಕೆ ಮೂಲವಾಗಿದೆಯೇ? ದುಡ್ಡು ತನಗೆ ಸಲ್ಲಬೇಕು ಅಂತ ಅವರಿಬ್ಬರ ನಡುವೆ ವಾಗ್ವಾದ ನಡೆಯುತ್ತಿದೆಯೇ? ರಾಜ್ಯದ ಬೇರೆ ಭಾಗಗಳಲ್ಲಿ ಏನು ನಡೆದಿದೆ ಅಂತ ಗೊತ್ತಿಲ್ಲ ಆದರೆ, ಬೆಳಗಾವಿ ಗ್ರಾಮೀಣ (Belagavi Rural) ಕ್ಷೇತ್ರದ ನಿವಾಸಿಗಳಾಗಿರುವ ಈ ಮಹಿಳೆಯರು ಮಾತ್ರ ಹೌದು, ಈ ಯೋಜನೆ ಜಗಳಕ್ಕೆ ಕಾರಣವಾಗುತ್ತಿದೆ ಎನ್ನುತ್ತಿದ್ದಾರೆ. ತಮ್ಮ ಅತ್ತೆಗಳು ಮಾತ್ರ ವೋಟು (vote) ಹಾಕಿಲ್ಲ, ನಾವೂ ಹಾಕಿದ್ದೇವೆ ಅಂತ ಸೊಸೆಗಳು ಹೇಳಿದರೆ; ಅತ್ತೆಯಂದಿರು, ಸೊಸೆಗಳ ಜೊತೆ ಜಗಳ ಮಾಡುತ್ತಾ ಕೂರಲಾಗದು, ಕೊಡೋದಾದರೆ ಇಬ್ಬರಿಗೂ ಕೊಡಲಿ ಅನ್ನುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿಸಿಕೊಂಡರೆ ನಿಮಗೆ ಸಮಸ್ಯೆ ಅರ್ಥವಾದೀತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More