ಚಿಕ್ಕಮಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Karnataka Assembly Elections 2023 Result)ನಿನ್ನೆ(ಮೇ.13) ಹೊರಬಿದ್ದಿದ್ದು, 137 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದರಂತೆ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಟಿ ರವಿ 20 ವರ್ಷಗಳ ಬಳಿಕ ಮೊದಲ ಬಾರಿಗೆ ಸೋತಿದ್ದಾರೆ. ಹೌದು ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಈ ಬಾರಿ ಗೆಲುವು ಸಾಧಿಸಿದ್ದಾರೆ. ಈ ಮಧ್ಯೆ ಸಿ.ಟಿ ರವಿ ನಿವಾಸಕ್ಕೆ ಬಾಲಕ ಭೇಟಿ ನೀಡಿ ಧೈರ್ಯ ತುಂಬಿದ್ದಾನೆ. ಹೌದು ‘ಸರ್ ನಿಮ್ಮ ಜೊತೆ ನಾವಿರ್ತೇವೆ, ನಾವು ಬಿಜೆಪಿ ಜೊತೆ ಇರ್ತೇವಿ, ನೀವು ಭಯ ಪಡಬೇಡಿ ಎನ್ನುವ ಮೂಲಕ ಬಾಲಕ ಧೈರ್ಯ ತುಂಬಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ