ಭಯಾನಕ, ಆತಂಕಕಾರಿ: ಚುನಾವಣಾ ಸಭೆಗೆ ತೆರಳುತ್ತಿದ್ದ ಸಚಿವ ಕೆಟಿಆರ್, ವಾಹನದ ಮೇಲಿಂದ ಮುಗ್ಗರಿಸಿಬಿದ್ದರು! ವಿಡಿಯೋ ನೋಡಿ ​

ಸಾಧು ಶ್ರೀನಾಥ್​

Updated on: Nov 09, 2023 | 4:46 PM

ನಿಜಾಮಾಬಾದಿನ ಅರ್ಮೂರು ಎಂಬಲ್ಲಿ ವಾಹನದ ಮೇಲೆ ನಿಂತು ಸಾಗುತ್ತಿದ್ದ ಕೆಟಿಆರ್​ ಮತ್ತು ಅವರ ತಂಡ ಇದ್ದಕ್ಕಿದ್ದಂತೆ ಮೇಲಿಂದ ಮುಗ್ಗರಿಸಿಬಿದ್ದಿದ್ದಾರೆ. ವಿಡಿಯೋ ನೋಡಿ ​

ಹೈದರಾಬಾದ್, ನವೆಂಬರ್​ 9: ತೆಲಂಗಾಣ ಅಸೆಂಬ್ಲಿ ಚುನಾವಣೆಗಳು ಸಮೀಪಿಸುತ್ತಿದ್ದು, ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಈ ಮಧ್ಯೆ ಭಯಾನಕ, ಆತಂಕಕಾರಿ ಘಟನೆಯೊಂದು ನಡೆದಿದೆ. ಸಚಿವ ಕೆಟಿ ರಾಮರಾವ್​ ಅವರು ತಮ್ಮ ತಂಡದೊಂದಿಗೆ ಮೆಟಡಾರ್​ ವಾಹನದ ಮೇಲೆ ಹತ್ತಿ ಸಭೆಯಲ್ಲಿ ಪಾಲ್ಗೊಳ್ಳಲು ವೇಗವಾಗಿ ಚಲಿಸುತ್ತಿದ್ದರು.

ಆ ವೇಳೆ ಆಕಸ್ಮಿಕ ಘಟನೆಯೊಂದು ನಡೆದಿದ್ದು, ನಿಜಾಮಾಬಾದಿನ ಅರ್ಮೂರು ಎಂಬಲ್ಲಿ ವಾಹನದ ಮೇಲೆ ನಿಂತು ಸಾಗುತ್ತಿದ್ದ ಕೆಟಿಆರ್​ ಮತ್ತು ಅವರ ತಂಡ ಇದ್ದಕ್ಕಿದ್ದಂತೆ ಮೇಲಿಂದ ಮುಗ್ಗರಿಸಿಬಿದ್ದಿದ್ದಾರೆ.  ಜೀವನ್ ರೆಡ್ಡಿ ಅವರು ನಾಮಿನೇಷನ್ ಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಪ್ರಚಾರ ವಾಹನದ ಚಾಲಕ ಸಡನ್​ ಆಗಿ ಬ್ರೇಕ್ ಹಾಕಿದಾಗ ಈ ಆಕಸ್ಮಿಕ ಘಟನೆ ನಡೆದಿದೆ. ​ ವಾಹನದ ಮುಂದೆ ಜನಸಂದಣಿ ಕಂಡುಬಂದಾಗ ಜನರನ್ನು ತಪ್ಪಿಸಲು ಚಾಲಕ ಸಡನ್​ ಆಗಿ ಬ್ರೇಕ್ ಹಾಕಿದ್ದ. ವಿಡಿಯೋ ನೋಡಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 09, 2023 04:26 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು