Murders for property in Karwar: ಆಸ್ತಿಗಾಗಿ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ರಾಕ್ಷಸರ ಕ್ರೌರ್ಯ ತಾಲಿಬಾನಿಗಳಿಗಿಂತ ಮಿಗಿಲಾದದ್ದು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 25, 2023 | 1:55 PM

ಶ್ರೀಧರ್ ಹೆಗಡೆ ಕ್ಯಾನ್ಸರ್ ಗೆ ಬಲಿಯಾದ ಬಳಿಕ ಅವರ ಹೆಂಡತಿ ಅಂದರೆ ಶಂಭು ಹೆಗಡೆ ಅವರ ಸೊಸೆ ಮತ್ತು ಆಕೆಯ ಮನೆಯವರು ಆಸ್ತಿಗಾಗಿ ಪೀಡಿಸಿ ಅದು ಸಿಗದೆ ಹೋದಾಗ ನಾಲ್ವರನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ

ಕಾರವಾರ: ತಾಲಿಬಾನಿಗಳಲ್ಲೂ ಇಂಥ ಕ್ರೌರ್ಯ ಇರಲಿಕ್ಕಿಲ್ಲ ಮಾರಾಯ್ರೇ. ಕೇವಲ ಒಂದು ಚೂರು ಆಸ್ತಿಗಾಗಿ ಮನೆಯ ಹಿರಿಯರಾದ ಶಂಭು ಹೆಗಡೆ 71 (Shambhu Hegde) ಅವರ ಪತ್ನಿ ಮಾದೇವಿ ಹೆಗಡೆ 60 (Madevi Hegde), ಇವರಿಬ್ಬರ ಮಗ ರಾಜೀವ್ ಹೆಗಡೆ 34 ಮತ್ತು ಅವರ ಪತ್ನಿ ಕುಸುಮಾ (Kusuma) ಅವರನ್ನು ಕಟುಕರ ಹಾಗೆ ನಿರ್ದರ್ಯತೆಯಿಂದ ಕೊಚ್ಚಿಹಾಕಲಾಗಿದೆ. ಜಿಲ್ಲೆಯ ಕಾಡುವಳ್ಳ ಓಣಿಬಾಗಿಲು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಕೊಲೆಗಳು ನಡೆದಿದ್ದು, ರಾಜೀವ್ ಮತ್ತು ಕುಸುಮಾ ಅವರ ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದರಿಂದ ಬಚಾವಾಗಿದ್ದಾರೆ. ರಾಜೀವ್ ಅವರ ಸಹೋದರ ಶ್ರೀಧರ್ ಹೆಗಡೆ ಕ್ಯಾನ್ಸರ್ ಗೆ ಬಲಿಯಾದ ಬಳಿಕ ಅವರ ಹೆಂಡತಿ ಅಂದರೆ ಶಂಭು ಹೆಗಡೆ ಅವರ ಸೊಸೆ ಮತ್ತು ಆಕೆಯ ಮನೆಯವರು ಆಸ್ತಿಗಾಗಿ ಪೀಡಿಸಿ ಅದು ಸಿಗದೆ ಹೋದಾಗ ನಾಲ್ವರನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಶಂಭು ಹೆಗಡೆ ಅವರ ಅಳಿಯ ಹೇಳುವುದನ್ನು ಕೇಳಿಸಿಕೊಳ್ಳಿ. ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ 3 ತಂಡಗಳನ್ನು ರಚಿಸಿದ್ದಾರೆ.
ಮತ್ತಷ್ಟು ವಿಡಿಯೋ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.