Mandya: ಯುವತಿಯೊಬ್ಬಳಿಂದ ಕಾಮಣ್ಣನಿಗೆ ಬಸ್​ನಲ್ಲೇ ಚಪ್ಪಲಿ ಸೇವೆ, ಕೊಸರಿಕೊಳ್ಳಲು ಪ್ರಯತ್ನಿಸಿದಂತೆಲ್ಲ ಬಿದ್ದವು ಏಟು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 21, 2024 | 7:12 PM

ಮನೆ ತಲುಪಿದ ಮೇಲೆ ಅವನಿಗೆ ತನ್ನಮ್ಮನ ಮುಖ ನೋಡಲೂ ಧೈರ್ಯ ಸಾಕಾಗಿರುವುದಿಲ್ಲ.

ಮಂಡ್ಯ: ಬೀದಿ ಕಾಮಣ್ಣರ (road Romeo) ಬಗ್ಗೆ ನೀವು ಕೇಳಿರುತ್ತೀರಿ ಅದರೆ ಬಸ್ ಕಾಮಣ್ಣರ ಬಗ್ಗೆ ಪ್ರಾಯಶ: ಕೇಳಿರಲಾರಿರಿ. ಅಂಥವನೊಬ್ಬನನ್ನು ಈ ವಿಡಿಯೋದ ಮೂಲಕ ನಿಮಗೆ ಪರಿಚಯಿಸುವಾಗ ಅವನನ್ನು ಬಸ್ಸಲ್ಲಿ ಚೆನ್ನಾಗಿ ಥಳಿಸಿದ ಯುವತಿಯ ಬಗ್ಗೆ ಹೆಮ್ಮೆಯೆನಿಸುತ್ತಿದೆ. ಅಸಲಿಗೆ ನಡೆದಿದ್ದೇನು ಅಂತ ನಿಮಗೆ ಮೊದಲು ಹೇಳ್ತೀವಿ. ಯುವತಿ ಪ್ರಾಯಶಃ ಕಾಲೇಜು ವಿದ್ಯಾರ್ಥಿನಿಯಿರಬಹುದು (college student) ಅನಿಸುತ್ತೆ; ಕೆಎಸ್ಆರ್ ಟಿಸಿ ಬಸ್ಸಲ್ಲಿ ಮಂಡ್ಯದಿಂದ (Mandya) ಪಾಂಡವಪುರಕ್ಕೆ (Panadavapura) ಹೋಗುವಾಗ ಖಾಲಿಯಿದ್ದ ಆಕೆಯ ಹಿಂಬದಿ ಸೀಟಲ್ಲಿ ಯುವಕ ಹೋಗಿ ಕೂತಿದ್ದಾನೆ. ಬರೀ ಕೂತಿದ್ದರೆ ಇದನ್ನೆಲ್ಲ ಬರೆಯುವ ಪ್ರಮೇಯ ಉದ್ಭವಿಸುತ್ತರಲಿಲ್ಲ. ಲಂಪಟ ಯುವಕ ಆಕೆಯನ್ನು ಅಸಭ್ಯವಾಗಿ ಮುಟ್ಟಲಾರಂಭಿಸಿದ್ದಾನೆ. ಅವನ ಚೇಷ್ಟೆಯಿಂದ ಕೆರಳಿದ ಯುವತಿ ಸೀಟಿಂದ ಎದ್ದು ಚಪ್ಪಲಿಯಿಂದ ಬಾರಿಸಲಾರಂಭಿಸಿದ್ದಾಳೆ! ಅವನು ಕೊಸರಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಯುವತಿ ಚೆನ್ನಾಗಿ ತದುಕಿದ್ದಾಳೆ. ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಚಪ್ಪಲಿ ಸೇವೆಯನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಯುವತಿಯಿಂದ ಕಷ್ಟಪಟ್ಟು ತಪ್ಪಿಸಿಕೊಳ್ಳುವ ಕಾಮುಕನನ್ನು ಬಸ್ ನಿಲ್ದಾಣದಲ್ಲಿದ್ದ ಒಂದಿಬ್ಬರು ಹಿಡಿದು ಏನಾಯಿತು ಅಂತ ಯುವತಿಯನ್ನು ಕೇಳುತ್ತಿರುವಂತೆಯೇ ಕೊಸರಿಕೊಳ್ಳುವಲ್ಲಿ ಸಫಲನಾಗಿ ಅಲ್ಲಿಂದ ಓಡಿಬಿಡುತ್ತಾನೆ! ಮನೆ ತಲುಪಿದ ಮೇಲೆ ಅವನಿಗೆ ತನ್ನಮ್ಮನ ಮುಖ ನೋಡಲೂ ಧೈರ್ಯ ಸಾಕಾಗಿರುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 03, 2023 04:36 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.