Chikmagalur: ಯುಗಾದಿ ಹಬ್ಬದ ನೆಪದಲ್ಲಿ ಕ್ಷೇತ್ರದ ಜನರಿಗೆ ಅಗತ್ಯ ಸಾಮಗ್ರಿಗಳ ಉಡುಗೊರೆ ಕಳಿಸಿದ ಶಾಸಕ ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2023 | 10:56 AM

ಬ್ಯಾಗು ನಗರ ಸಭೆಯ ಮಾಜಿ ಅಧ್ಯಕ್ಷ ನಟರಾಜ್ ಹೆಸರಲ್ಲಿದ್ದರೆ ಅದರ ಮೇಲೆ ಫೋಟೋ ರವಿಯವರದ್ದಿದೆ, ಬಿಜೆಪಿಯೇ ಭರವಸೆ ಅಂತ ಬ್ಯಾಗ್ ಮೇಲೆ ಮುದ್ರಿಸಲಾಗಿದೆ.

ಚಿಕ್ಕಮಗಳೂರು: ಮೊನ್ನೆಯಷ್ಟೇ ನಾವು ಸಿಟಿ ರವಿ (CT Ravi) ಪ್ರತಿನಿಧಿಸುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜನ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಉಡುಗೊರೆ ರೂಪದಲ್ಲಿ ಕಳಿಸಿದ ಸೇರೆಗಳನ್ನು ಬಹಿರಂಗವಾಗಿ ಸುಟ್ಟು ಹಾಕಿದ ವಿಡಿಯೋವನ್ನು ನಿಮಗೆ ತೋರಿಸಲಾಗಿತ್ತು. ಮುಂದಿನವಾರ ಬರಲಿರುವ ಯುಗಾದಿ ಹಬ್ಬದ (Ugadi Festival) ನೆಪದಲ್ಲಿ ಶಾಸಕರು ಕ್ಷೇತ್ರದ ಜನರಿಗೆ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದು ಬ್ಯಾಗಲ್ಲಿ ಹಾಕಿ ಮನೆಮನೆಗೆ ಕಳಿಸುತ್ತಿದ್ದಾರೆ. ಬ್ಯಾಗು ನಗರ ಸಭೆಯ ಮಾಜಿ ಅಧ್ಯಕ್ಷ ನಟರಾಜ್ (Nataraj) ಹೆಸರಲ್ಲಿದ್ದರೆ ಅದರ ಮೇಲೆ ಫೋಟೋ ರವಿಯವರದ್ದಿದೆ. ಬ್ಯಾಗಲ್ಲಿ ಸೀರೆಯ ಪ್ಯಾಕೆಟ್, ಅಕ್ಕಿ, ಬೆಲ್ಲ-ಬೇವು, ಕಳ್ಳೆಬೀಜ, ಅಡುಗೆ ಎಣ್ಣೆ ಪ್ಯಾಕೆಟ್ ಬೇಳೆ, ಮಸಾಲೆ ಪದಾರ್ಥ ಮೊದಲಾದವಿವೆ. ಬಿಜೆಪಿಯೇ ಭರವಸೆ ಅಂತಲೂ ಬ್ಯಾಗ್ ಮೇಲೆ ಮುದ್ರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 16, 2023 10:56 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.