CM visits hometown: ಕಮಡೊಳ್ಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಸಂಭ್ರಮಿಸುವಾಗ ಭಾವುಕರಾದ ಬಸವರಾಜ ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ

Updated on: Mar 15, 2023 | 10:11 AM

ಬೊಮ್ಮಾಯಿ ಅವರನ್ನು ಊರಲ್ಲಿ ಕಂಡು ಜನ ಎಷ್ಟು ರೋಮಾಂಚನಗೊಂಡರೋ ಮುಖ್ಯಮಂತ್ರಿಗಳು ಸಹ ಅವರೊಂದಿಗೆ ಬೆರೆತು ಅಷ್ಟೇ ಸಂತೋಷಪಟ್ಟರು. ಕೆಲವು ಸಂದರ್ಭಗಳಲ್ಲಿ ಭಾವುಕರಾದರು.

ಧಾರವಾಡ: ಊರಿಗೆ ಅರಸನಾದರೂ ತಾಯಿಗೆ ಮಗ ಅಂತ ಹೇಳುತ್ತಾರೆ; ಹಾಗೆಯೇ ಬಸವರಾಜ ಬೊಮ್ಮಾಯಿ (Basavaraj Bommai) ನಾಡಿನ ಮುಖ್ಯಮಂತ್ರಿಯಾದರೂ ತಮ್ಮ ಹುಟ್ಟಿದೂರು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿರುವ ಕಮಡೊಳ್ಳಿ (Kamadolli) ನಿವಾಸಿಗಳಿಗೆ ಮನೆಮಗನೇ! ಮಂಗಳವಾರ ರಾತ್ರಿ ಅವರು ತಮ್ಮ ತವರಿನಲ್ಲಿ ರೋಡ್ ಶೋ (road show) ನಡೆಸಿದರು. ಅವರನ್ನು ಊರಲ್ಲಿ ಕಂಡು ಜನ ಎಷ್ಟು ರೋಮಾಂಚನಗೊಂಡರೋ ಮುಖ್ಯಮಂತ್ರಿಗಳು ಸಹ ಅವರೊಂದಿಗೆ ಬೆರೆತು ಅಷ್ಟೇ ಸಂತೋಷಪಟ್ಟರು. ಕೆಲವು ಸಂದರ್ಭಗಳಲ್ಲಿ ಭಾವುಕರಾದರು. ಆಪ್ತರ, ನೆಂಟರಿಷ್ಟರ ಮನೆಗಳಿಗೆ ಭೇಟಿ ನೀಡಿ ಗ್ರೂಪ್ ಫೋಟೋಗಳಿಗೆ ಪೋಸ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.