ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಹಲವಾರು ಪೂಜಾ ವಿಧಿವಿಧಾನಗಳನ್ನು ಮಾಡುತ್ತೇವೆ. ನಾವು ಎಷ್ಟೇ ಪೂಜೆಗಳನ್ನು ಮಾಡಿದರೂ ನಮ್ಮ ದೇಹಕ್ಕೆ ಧನಾತ್ಮ ಶಕ್ತಿ ಬರುವುದಿಲ್ಲ. ಧನಾತ್ಮ ಶಕ್ತಿ ಬರಬೇಕಿದ್ದರೇ ನಾವು ಶುದ್ಧವಾಗಿರಬೇಕು. ಅಂದರೆ ಮನಸ್ಸು, ಮಾತು, ದೃಷ್ಠಿ ಶುದ್ಧವಾಗಿರಬೇಕು. ನಮ್ಮ ದೇಹಕ್ಕೆ ಧನಾತ್ಮ ಶಕ್ತಿ ಬರಬೇಕೆಂದರೆ ನಮ್ಮ ಪೂರ್ವಜರು ಹಬ್ಬಗಳಲ್ಲಿ, ಧರ್ಮಕಾರ್ಯಗಳಲ್ಲಿ ಮತ್ತು ಮದುವೆ ಸಮಯದಲ್ಲಿ ಮೆಹಂದಿ ಹಚ್ಚುಕೊಳ್ಳುತ್ತಿದ್ದರು. ಅಲ್ಲದೆ ಸಾಂಸ್ಕೃತಿ ಕಾರ್ಯಕ್ರಮಗಳ ಸಮಯದಲ್ಲಿ ಮಕ್ಕಳ ಕೈಗೆ ಮೆಹಂದಿ ಹಾಕುತ್ತೇವೆ. ಈ ಮೆಹಂದಿ ಹಾಕಿಕೊಳ್ಳುವುದರಿಂದ ಆಗುವ ಪ್ರಯೋಜನವೇನು? ವಿಶೇಷತೆ ಏನು? ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.