Karnataka Assembly Polls: 5 ವರ್ಷ ನಾಪತ್ತೆಯಾಗಿ ಈಗ ವೋಟು ಕೇಳಲು ಬಂದ ಬಿಜೆಪಿ ಶಾಸಕನನ್ನು ತರಾಟೆಗೆ ತೆಗೆದುಕೊಂಡ ದೇವರ ಹಿಪ್ಪರಗಿ ಮತದಾರರು

ಅರುಣ್​ ಕುಮಾರ್​ ಬೆಳ್ಳಿ

Updated on: Apr 27, 2023 | 10:35 AM

5 ವರ್ಷಗಳಲ್ಲಿ ಅವರನ್ನು ಕೇವಲ ಎರಡನೇ ಬಾರಿ ಅವರನ್ನು ನೋಡುತ್ತಿದ್ದೇವೆ ಎಂದು ಕಾನ್ಯಾಳ ಗ್ರಾಮಸ್ಥರು ಅರೋಪಿಸುತ್ತಿದ್ದಾರೆ.

ವಿಜಯಪುರ: ಚುನಾವಣೆಯಲ್ಲಿ ಗೆದ್ದ ಬಳಿಕ ವೋಟು ನೀಡಿದ ಮತದಾರರನ್ನು ಕಡೆಗಣಿಸಿದರೆ ಹೀಗೆಯೇ ಆಗುತ್ತದೆ. ದೇವರ ಹಿಪ್ಪರಗಿ (Devara Hipparagi) ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ (Somanagouda Patil Sasnur) ಕ್ಷೇತ್ರದ ಕಾನ್ಯಾಳ (Kanyal) ಗ್ರಾಮದ ನಿವಾಸಿಗಳಿಂದ ಹೀಗೆ ತರಾಟೆಗೊಳಗಾದರು. ಗ್ರಾಮಸ್ಥರು ಹೇಳೋದೇನೆಂದರೆ 2018ರಲ್ಲಿ ವಿಧಾನ ಸಭೆಗೆ ಆಯ್ಕೆಯಾದ ಬಳಿಕ ಕಾನ್ಯಾಳ ಗ್ರಾಮಕ್ಕೆ ಒಮ್ಮೆಯೂ ಬೇಟಿ ನೀಡಿಲ್ವಂತೆ. ಆಗ ವೋಟು ಕೇಳಲು ಬಂದವರು ಈಗ ಚುನಾವಣೆ ಸಮಯದಲ್ಲಿ ಮಾತ್ರ ಬಂದಿದ್ದಾರೆ, 5 ವರ್ಷಗಳಲ್ಲಿ ಅವರನ್ನು ಕೇವಲ ಎರಡನೇ ಬಾರಿ ಅವರನ್ನು ನೋಡುತ್ತಿದ್ದೇವೆ ಎಂದು ಗ್ರಾಮಸ್ಥರು ಅರೋಪಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಮಾಧಾನಪಡಿಸುತ್ತಿದ್ದಾರಾದರೂ ರೊಚ್ಚಿಗೆದ್ದಿರುವ ಜನ ಕೇಳಲು ತಯಾರಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 27, 2023 10:35 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.