ಜಮೀನಲ್ಲಿ ಎಡೆಹೊಡೆಯುವ ಕೆಲಸವನ್ನು ಹೀಗೂ ಮಾಡಬಹುದು, ಧಾರವಾಡ ರೈತ ಕಲ್ಮೇಶ್​ ಹಾಗೆ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 03, 2023 | 2:04 PM

ಹಳೆಯ ಸೈಕಲ್ ಗಳನ್ನು ಸಾಮಾನ್ಯವಾಗಿ ಮಾರಿಬಿಡುತ್ತಾರೆ, ಹಳೆಯದಾಗಿ ತುಕ್ಕು ಹಿಡಿದಿದ್ದರೆ ಸ್ಕ್ರ್ಯಾಪ್ ಗೆ ಹಾಕುತ್ತಾರೆ. ಆದರೆ ಕಲ್ಮೇಶ್ ಹಳೆ ಸೈಕಲನ್ನು ಹೀಗೆ ಬದಲಾಯಿಸಿ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ

ಧಾರವಾಡ: ಸ್ಟಾರ್ಟ್ ಅಪ್ ಯೋಜನೆಯಲ್ಲಿ (Start Up Schemes) ಕೋಟ್ಯಾಂತರ ಹಣ ತೊಡಗಿಸಿ ಉದ್ಯಮಿಗಳೆನಿಸಿಕೊಳ್ಳುವವರು ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಿರಕೋಳ ಗ್ರಾಮದ ರೈತ ಕಲ್ಮೇಶ್ ತಲವಾಯಿ (Kalmesh Talavayi) ಅವರನ್ನೊಮ್ಮೆ ಭೇಟಿಯಾಗಬೇಕು. ಕಲ್ಮೇಶ್ ಅವರ ಇನ್ನೋವೇಶನ್ ಹೇಗಿದೆ ಅಂತ ಒಮ್ಮೆ ನೋಡಿ. ಎಡೆ ಹೊಡೆಯಲೆಂದೇ ಅವರು ಈ ಮಾದರಿಯನ್ನು ಸೃಷ್ಟಿ ಮಾಡಿದ್ದಾರೆ. ಹಳೆಯ ಸೈಕಲ್ ಗಳನ್ನು (old cycles) ಸಾಮಾನ್ಯವಾಗಿ ಮಾರಿಬಿಡುತ್ತಾರೆ, ಹಳೆಯದಾಗಿ ತುಕ್ಕು ಹಿಡಿದಿದ್ದರೆ ಸ್ಕ್ರ್ಯಾಪ್ ಗೆ ಹಾಕುತ್ತಾರೆ. ಆದರೆ ಕಲ್ಮೇಶ್ ಹಳೆ ಸೈಕಲನ್ನು ಹೀಗೆ ಬದಲಾಯಿಸಿ ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಗಳೆ (ಎಡೆ) ಹೊಡೆಯೋದು ಕಷ್ಟದ ಕೆಲಸ ಮಾರಾಯ್ರೇ. ಹಾಗಾಗೇ ಆ ಕೆಲಸಕ್ಕೆ ಎತ್ತು-ಹೋರಿಗಳನ್ನು ಬಳಸುತ್ತಾರೆ. ಕಲ್ಮೇಶ್ ತಮ್ಮ ದ್ವಿಚಕ್ರವಾಹನವನ್ನು ಬಳಸಿ ಎಡೆ ಹೊಡೆಯುತ್ತಿದ್ದಾರೆ. ಅವರ ಇನ್ನೋವೇಶನ್ ಗೆ ನಮ್ಮದೊಂದು ಸಲಾಂ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.