ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ಬೆಳಗ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸಕ್ಕೆ ತೆರಳಿ ಒಂದು ಚುಟುಕು ಸಭೆಯನ್ನು ನಡೆಸಿದರು. ಇಬ್ಬರ ಮನೆಗಳು ನಗರದ ಸದಾಶಿವನಗರದಲ್ಲಿವೆ. ಖರ್ಗೆಯವರ ಮನೆಗೆ ಯಾವ ವಿಷಯ ಚರ್ಚಿಸಲು ಶಿವಕುಮಾರ್ ಅಗಮಿಸಿದ್ದರು ಅನ್ನೋದು ಗೊತ್ತಾಗಲಿಲ್ಲ. ಪತ್ರಕರ್ತರರೊಬ್ಬರು ಕೇಳಿದಾಗ ತಿಂಡಿ ತಿನ್ನಲು ಹೋಗುತ್ತಿರುವುದಾಗಿ ಶಿವಕುಮಾರ್ ಹೇಳಿದರು. ಆದರೆ ಭೇಟಿಯ ಕಾರಣ ಶಿವಕುಮಾರ್ ಹೇಳಿದಷ್ಟು ಸರಳವಾಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಅಗಮಿಸಿರುವುದು ಕಾಂಗ್ರೆಸ್ ಶಿಬಿರದಲ್ಲಿ ಅತಂಕ ಮೂಡಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ