Who would be CM: ದೆಹಲಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವಕುಮಾರ್, ‘ಖಾನಾ ಖಾನಾ ಖಾನಾ’ ಅಂತ ಉತ್ತರಿಸಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: May 16, 2023 | 2:56 PM

ಅವರು ಯಾವ ಅರ್ಥದಲ್ಲಿ ಖಾನಾ ಖಾನಾ ಖಾನಾ ಅಂತ ಹೇಳಿದರೆನ್ನುವುದು ಯಾವ ಭಾಷೆಯ ಪತ್ರಕರ್ತನಿಗೂ ಅರ್ಥವಾಗಲಿಲ್ಲ!

ದೆಹಲಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು ಇನ್ನೂ ಒಗಟಾಗೇ ಉಳಿದಿದೆ. ಡಿಕೆ ಶಿವಕುಮಾರ್ (DK Shivakumar) ಅವರು ದೆಹಲಿ ತಲುಪಿಯಾಗಿದೆ. ಅವರು ನೇರವಾಗಿ ತಮ್ಮ ಸಹೋದರ ಡಿಕೆ ಸುರೇಶ್ (DK Suresh) ಮನೆಗೆ ಹೋಗಿ ಎಐಸಿಸಿ ಕಚೇರಿಗೆ ಬಂದಾಗ ಸಹಜವಾಗೇ ಕನ್ನಡ ಮತ್ತು ರಾಷ್ಟ್ರೀಯ ವಾಹಿನಿಗಳ (national channels) ಪ್ರತಿನಿಧಿಗಳು ಅವರನ್ನು ಮುತ್ತಿದರು. ಮುಖ್ಯಮಂತ್ರಿ ಯಾರಾಗಲಿದ್ದಾರೆ ಅಂತ ಪತ್ರಕರ್ತರು ಅವರನ್ನು ಕೇಳಿದಾಗ, ‘ಖಾನಾ ಖಾನಾ ಖಾನಾ’ ಅಂತ ಒಗಟಿನಲ್ಲಿ ಉತ್ತರಿಸುತ್ತಾರೆ. ಖಾನಾ ಅಂದರೆ ಊಟ, ಅಥವಾ ತಿನ್ನುವುದು ಅಂತ ನಮಗೆ ಗೊತ್ತು. ಶಿವಕುಮಾರ್ ಊಟಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದರೆ? ಅವರು ಯಾವ ಅರ್ಥದಲ್ಲಿ ಖಾನಾ ಖಾನಾ ಖಾನಾ ಅಂತ ಹೇಳಿದರೆನ್ನುವುದು ಯಾವ ಭಾಷೆಯ ಪತ್ರಕರ್ತನಿಗೂ ಅರ್ಥವಾಗಲಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.