DK Shivakumar: ದೆಹಲಿ ವಿಮಾನ ನಿಲ್ದಾಣದಲ್ಲಿ ಜಮೀರ್ ಅಹ್ಮದ್ ಓಡಿಬಂದು ವಿಶ್ ಮಾಡಿದಾಗಲೇ ಮುಗುಮ್ಮಾಗಿ ಕೂತಿದ್ದ ಶಿವಕುಮಾರ್​ ಮುಗುಳ್ನಕ್ಕಿದ್ದು!

|

Updated on: May 18, 2023 | 4:05 PM

ಜಮೀರ್ ರನ್ನು ನೋಡಿದ ಬಳಿಕ ಶಿವಕುಮಾ​ರ್ ಜೊತೆ ಮಾತಾಡುತ್ತಿದ್ದ ವ್ಯಕ್ತಿ ಅಲ್ಲಿಂದ ಎದ್ದು ಹೋಗುತ್ತಾರೆ.

ದೆಹಲಿ: ರಾಜ್ಯದ ಮುಖ್ಯಮಂತ್ರಿಯನ್ನು ಹೈಕಮಾಂಡ್ ಅಯ್ಕೆ ಮಾಡಿದ ಬಳಿಕ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಬಣಗಳ ನಡುವೆ ತಾತ್ಕಾಲಿಕವಾಗಿ ತಲೆದೋರಿದ್ದ  ವೈಮನಸ್ಸು ತಿಳಿಯಾದಂತಿದೆ. ಆದರೆ, ಶಿವಕುಮಾರ್ ಮುಖದಲ್ಲಿ ಈಗಲೂ ನಿರಾಶೆಯ ಛಾಯೆಯನ್ನು ಗುರುತಿಸಬಹುದು. ದೆಹಲಿ ಏರ್ಪೋಟ್ ನಲ್ಲಿ (Delhi airport) ಕುಳಿತು ಬೆಂಗಳೂರಿಗೆ ಹೊರಡುವ ವಿಮಾನಕ್ಕಾಗಿ ಕಾಯುತ್ತಿರುವಾಗ ವ್ಯಕ್ತಿಯೊಬ್ಬರು ಅವರ ಹತ್ತಿರ ಕುಳಿತು ಗಂಭೀರವಾಗಿ ಏನನ್ನೋ ಹೇಳುತ್ತಿದ್ದಾರೆ. ಅದರೆ, ಶಿವಕುಮಾರ್ ಆ ವ್ಯಕ್ತಿ ಹೇಳುವುದನ್ನು ಅನ್ಯಮನಸ್ಕತೆಯಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಅಷ್ಟರಲ್ಲಿ ಚಾಮರಾಜಪೇಟೆಯಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಅಲ್ಲಿಗೆ ನಗುತ್ತಾ ಬಂದು ಶಿವಕುಮಾರ್ ಗೆ ವಿಶ್ ಮಾಡಿದಾಗ ಮಾತ್ರ ಮುಗಳ್ನಕ್ಕು ಪ್ರತಿವಿಶ್ ಮಾಡುತ್ತಾರೆ. ಜಮೀರ್ ರನ್ನು ನೋಡಿದ ಬಳಿಕ ಶಿವಕುಮಾ​ರ್ ಜೊತೆ ಮಾತಾಡುತ್ತಿದ್ದ ವ್ಯಕ್ತಿ ಅಲ್ಲಿಂದ ಎದ್ದು ಹೋಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on