ರಾಮನಗರ: ಬಿಡದಿಯಲ್ಲಿ ಇಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಮಾಡಿದ್ದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಸಮಾರಂಭ ನಡೆಯುತ್ತಿದ್ದಾಗ ನಡೆದ ಹಲವು ಕುತೂಹಲಕಾರಿ ಸಂಗತಿಗಳು ನಡೆದವು. ಅವಗಳಲ್ಲಿ ಇಲ್ಲಿ ಕಾಣುತ್ತಿರುವ ದೃಶ್ಯವೂ ಒಂದು. ರಾಮನಗರ ಉಸ್ತುವಾರಿ ಸಚಿವ ಡಾ ಸಿಎನ್ ಆಶ್ವಥ್ ನಾರಾಯಣ (Dr CN Ashwath Narayan) ಮತ್ತು ಅಲ್ಲಿನ ಸಂಸದ ಡಿಕೆ ಸುರೇಶ್ (DK Suresh) ನಡುವೆ ಹಾವು-ಮುಂಗುಸಿ ಸಂಬಂಧ. ಹಿಂದೊಮ್ಮೆ ಅವರು ರಾಮನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಒಬ್ಬರ ಮೇಲೊಬ್ಬರು ಏರಿಹೋಗಿದ್ದು ಸಮಸ್ತ ಕನ್ನಡಿಗರು ನೋಡಿದ್ದಾರೆ. ಆದರೆ, ಇವತ್ತು ನೋಡಿ, ಅಕ್ಕಪಕ್ಕ ಕೂತು ಹಳೇ ದೋಸ್ತಿಗಳ ಹಾಗೆ ಹರಟುತ್ತಿದ್ದಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ