ಹಾಸನ: ನಾಡಹಬ್ಬ ದಸರಾ ಉತ್ಸವದಲ್ಲಿ ಎಂಟು ಬಾರಿ ಅಂಬಾರಿ (Howdah) ಹೊತ್ತು ತನ್ನ ರಾಜಗಾಂಭೀರ್ಯದೊಂದಿಗೆ ಮೈಸೂರಿನ ರಸ್ತೆಗಳಲ್ಲಿ ನಡೆಯುತ್ತಾ ಕನ್ನಡಿಗರು, ದೇಶದ ಬೇರೆ ಬೇರೆ ಭಾಗಗಳ ಜನ ಮತ್ತು ವಿದೇಶಿಯರ ಮನಸೂರೆಗೊಂಡು ಸಾಂಸ್ಕೃತಿಕ ರಾಯಭಾರಿ ಅನಿಸಿಕೊಂಡಿದ್ದ ಮೈಸೂರು ಒಡೆಯರ್ ರಾಜವಂಶಸ್ಥರ ಹೆಮ್ಮೆಯ ಆನೆ ಅರ್ಜುನ (elephant Arjuna) ಈಗ ಕೇವಲ ನೆನಪು ಮಾತ್ರ. ಕಾಡಾನೆಗಳನ್ನು (wild elephants) ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಬಲಿಯಾದ ಅರ್ಜುನನ ಸಾವಿನ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಅವನ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಕಾರಣ ಎಂದು ಜನ ಮತ್ತು ಮಾವುತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ವಿಷಯವನ್ನು ಇನ್ನೊಂದು ಸಂದರ್ಭದಲ್ಲಿ ಚರ್ಚೆ ಮಾಡೋಣ. ಅಗಲಿದ ಅರ್ಜುನನಿಗೆ ಸರ್ಕಾರೀ ಗೌರವದೊಂದಿಗೆ ಜಿಲ್ಲೆಯ ಸಕಲೇಶಪುರ ಹತ್ತಿರದ ದಬ್ಬಳಿಕಟ್ಟೆಯಲ್ಲಿರುವ ಕೆಎಫ್ ಡಿಸಿ ನೆಡುತೋಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮಾವುತರು ಮತ್ತು ಅರ್ಜುನನ್ನು ಹತ್ತಿರದಿಂದ ಬಲ್ಲ ಜನ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Tue, 5 December 23