ಉಡುಪಿಯ ಮಲ್ಪೆ ಬಳಿ ಅರಬ್ಬೀ ಸಮುದ್ರದಲ್ಲಿ ಮಗುಚಿದ ಮೀನುಗಾರಿಕಾ ಬೋಟ್, 8 ಮೀನುಗಾರರ ರಕ್ಷಣೆ!

ಅರುಣ್​ ಕುಮಾರ್​ ಬೆಳ್ಳಿ

Updated on: Dec 22, 2023 | 12:58 PM

ಬೋಟ್ ಸಮುದ್ರದ ಆಳಕ್ಕೆ ತೆರಳಿದ್ದಾಗ ಅದರ ತಳಭಾಗಕ್ಕೆ ಯಾವುದೋ ವಸ್ತು ತಗುಲಿದ ಕಾರಣ ಆ ಭಾಗದಲ್ಲಿ ಛೇದವುಂಟಾಗಿ ನಾವೆಯಲ್ಲಿ ನೀರು ತುಂಬಿಕೊಂಡಿದೆ. ಈ ಬೋಟ್ ಗೆ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು ಮುಳುಗಿದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಅವರನ್ನು ಕಾಪಾಡಿದ್ದಾರೆ.

ಉಡುಪಿ: ಮೀನುಗಾರಿಕೆಗೆ ಬಳಸುವ ನಾವೆಯೊಂದು ಅರಬ್ಬೀ ಸಮುದ್ರದಲ್ಲಿ (The Arabian Sea) ಹಂತಹಂತವಾಗಿ ಮುಳುಗುತ್ತಿರುವ ಭಯಾನಕ ದೃಶ್ಯ ಕೆಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಈ ಬೋಟ್ ನಲ್ಲಿ ಮೀನು ಹಿಡಿಯಲೆಂದು ಅರಬ್ಬೀ ಸಮುದ್ರದ ಆಳಕ್ಕೆ (deep waters) ತೆರಳಿದ್ದ ಎಲ್ಲ 8 ಮೀನುಗಾರರನ್ನು (fishermen) ರಕ್ಷಿಸಲಾಗಿದೆ. ಟಿವಿ9 ಕನ್ನಡ ವಾಹಿನಿಯ ಉಡುಪಿ ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ಉಡುಪಿಯ ಮಲ್ಪೆ (Malpe) ಬಳಿ ಅವಗಢ ಸಂಭವಿಸಿದ್ದು ಮುಳುಗಿದ ಬೋಟ್ ಉಡುಪಿ ತಾಲ್ಲೂಕಿನಲ್ಲಿರುವ ಕಡೆಕಾರಿನ ರಕ್ಷಾ ಅವರಿಗೆ ಸೇರಿದ್ದಂತೆ. ಬೋಟ್ ಸಮುದ್ರದ ಆಳಕ್ಕೆ ತೆರಳಿದ್ದಾಗ ಅದರ ತಳಭಾಗಕ್ಕೆ ಯಾವುದೋ ವಸ್ತು ತಗುಲಿದ ಕಾರಣ ಆ ಭಾಗದಲ್ಲಿ ಛೇದವುಂಟಾಗಿ ನಾವೆಯಲ್ಲಿ ನೀರು ತುಂಬಿಕೊಂಡಿದೆ. ಈ ಬೋಟ್ ಗೆ ಹತ್ತಿರದಲ್ಲೇ ಇದ್ದ ಮೂಕಾಂಬಿಕಾ ಅನುಗ್ರಹ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದವರು ಮುಳುಗಿದ ಬೋಟ್ ನಲ್ಲಿದ್ದವರ ರಕ್ಷಣೆ ಧಾವಿಸಿ ಅವರನ್ನು ಕಾಪಾಡಿದ್ದಾರೆ. ಬೋಟ್ ಒಡತಿ ರಕ್ಷಾಗೆ ಸುಮಾರು ರೂ. 18 ಲಕ್ಷಗಳಷ್ಟು ನಷ್ಟವುಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.