ಫೋನಲ್ಲಿ ಮಾತಾಡುತ್ತಿದ್ದ ಸದಾನಂದ ಗೌಡರು ಮಾಧ್ಯಮಗಳ ಮೈಕ್ ಆನ್ ಇದೆ ಅಂತ ಅಶೋಕ ಹೇಳಿದಾಗ ಯೋಚನೆಗೆ ಬಿದ್ದರು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2023 | 1:52 PM

ಅಶೋಕ್ ಮಾತಿಗೆ ಪ್ಯಾದೆ ನಗೆ ಬೀರುವ ಗೌಡರು ಅಪದ್ಧವಾದದ್ದೇನಾದರೂ ಮಾತಾಡಿದೆನಾ ಅಂತ ಗಂಭೀರ ಮುಖಭಾವದಲ್ಲಿ ಯೋಚಿಸಲಾರಂಭಿಸುತ್ತಾರೆ!

ರಾಮನಗರ: ನಮ್ಮ ನಾಯಕರಿಗೆ ಮಿಡಿಯಾದ ಮೈಕ್ ಗಳೆಂದರೆ ಬಹಳ ಹೆದರಿಕೆ ಮಾರಾಯ್ರೇ. ಕಂದಾಯ ಸಚಿವ ಆರ್ ಅಶೋಕ್ (R Ashoka) ಅವರ ನೇತೃತ್ದದಲ್ಲಿ ಬಿಜೆಪಿಯ ಒಂದು ತಂಡ ರಾಮನಗರ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಚನ್ನಪಟ್ಟಣ (Channapatna) ತಲುಪಿದಾಗ ಒಂದು ಘಟನೆ ನಡೆಯಿತು. ಅಶೋಕ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ಅವರ ಬಲಭಾಗದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ (Sadananda Gowda) ಜೋರಾಗಿ ಫೋನಲ್ಲಿ ಮಾತಾಡಲಾರಂಭಿಸುತ್ತಾರೆ. ಮಾಧ್ಯಮದ ಮೈಕ್ಗಳು ಆನ್ ಆಗಿದ್ದರಿಂದ ಅವರೆಲ್ಲಿ ಅಪದ್ಧವಾದದ್ದೇನಾದರೂ ಮಾತಾಡಿಯಾರು ಎಂಬ ಭಯದಲ್ಲಿ ಮೊದಲಿಗೆ ಮೈಕ್ ಆನ್ ಇದೆ ಅಂತ ಸನ್ನೆ ಮಾಡುತ್ತಾ ಹೇಳುತ್ತಾರೆ, ನಂತರ ಮೈಕ್ ಆನ್ ಇದೆ ಅಂತ ಬಾಯಿಂದ ಹೇಳುತ್ತಾರೆ. ಅವರ ಮಾತಿಗೆ ಪ್ಯಾದೆ ನಗೆ ಬೀರುವ ಗೌಡರು ಅಪದ್ಧವಾದದ್ದೇನಾದರೂ ಮಾತಾಡಿದೆನಾ ಅಂತ ಗಂಭೀರ ಮುಖಭಾವದಲ್ಲಿ ಯೋಚಿಸಲಾರಂಭಿಸುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.