Assembly Polls:  ಬೆಂಗಳೂರಿಂದ ಚಿಕ್ಕಬಳ್ಳಾಪುರದ ಚೇಳೂರಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್

|

Updated on: Mar 28, 2023 | 6:53 PM

ಇವತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಸಹ ಬೆಂಗಳೂರಿಂದ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಗ್ರಾಮಕ್ಕೆ ಚಾಪರ್ ನಲ್ಲೇ ಆಗಮಿಸಿದರು.

ಚಿಕ್ಕಬಳ್ಳಾಪುರ: ಈಗಿನ ಕಾಲದ ರಾಜಕಾರಣಿಗಳಿಗೆ ಹೆಲಿಕಾಪ್ಟರ್ (Helicopter) ಹಾರಾಡುವುದು ಸಾಮಾನ್ಯ ವಿಷಯವಾಗಿಬಿಟ್ಟಿದೆ ಮಾರಾಯ್ರೇ. ಈ ಪಾಟಿ ದುಡ್ಟು ಇವರಿಗೆ ಬರೋದು ಎಲ್ಲಿಂದ ಬರುತ್ತದೆ ಅಂತ ಆಶ್ಚರ್ಯವೂ ಆಗುತ್ತದೆ. ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ, ಬಿ ಎಸ್ ಯಡಿಯೂರಪ್ಪ, ಡಿಕೆ ಶಿವಕುಮಾರ್ ಮೊದಲಾದವರೆಲ್ಲ ಚಾಪರ್ ಗಳಲ್ಲಿ ಸುತ್ತುವುದನ್ನು ನಾವು ನೋಡಿದ್ದೇವೆ. ಇವತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರು ಸಹ ಬೆಂಗಳೂರಿಂದ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಗ್ರಾಮಕ್ಕೆ ಚಾಪರ್ ನಲ್ಲೇ ಆಗಮಿಸಿದರು. ನಾಳೆ ಬಾಬುರಾವ್ ಚಿಂಚನಸೂರ್ (Baburao Chinchansur) ಸಹ ಬೆಂಗಳೂರಿಂದ ಗುರುಮಠಕಲ್ ಗೆ ಹೆಲಿಕಾಪ್ಟರ್ ನಲ್ಲಿ ಹೋದರೂ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on