MP expresses gratitude to people; ಇಡೀ ಸರ್ಕಾರ ನನ್ನ ವಿರುದ್ಧ ನಿಂತರೂ ಮಂಡ್ಯದ ಜನ ನನ್ನ ಕೈ ಬಿಡಲಿಲ್ಲ: ಸುಮಲತಾ ಅಂಬರೀಶ್

ಅರುಣ್​ ಕುಮಾರ್​ ಬೆಳ್ಳಿ

Updated on: Mar 10, 2023 | 2:27 PM

ಲೋಕಸಭಾ ಚುನಾವಣೆಯಲ್ಲಿ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಇಡೀ ಸರ್ಕಾರವೇ ನನ್ನ ವಿರುದ್ಧ ಸೆಣಸಿದರೂ ಮಂಡ್ಯದ ಜನ ತಮ್ಮ ಕೈಬಿಡಲಿಲ್ಲ ಎಂದು ಸುಮಲತಾ ಭಾವುಕರಾಗಿ ಹೇಳಿದರು.

ಮಂಡ್ಯ: ನಗರಲದಲ್ಲಿಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಬಹು ನಿರೀಕ್ಷಿತ ಸುದ್ದಿಗೋಷ್ಟಿಯನ್ನು ಕೊಂಚ ತಡವಾಗಿಯೇ ಆರಂಭಿಸಿದರು. ದಿವಂಗತ ಪತಿ ಅಂಬರೀಶ್ (Ambareesh) ಅವರ ಭಾವಚಿತ್ರದ ಮುಂದೆ ಕೂತು ಮಾತು ಆರಂಭಿಸಿದ ಸುಮಲತಾ, ಮೊದಲಿಗೆ ತಾವು ರಾಜಕಾರಣಕ್ಕೆ ಯಾಕೆ ಬರಬೇಕಾಯಿತು ಅನ್ನೋದನ್ನು ವಿವರಿಸಿದರು. ಯಾವುದೇ ಸ್ವಾರ್ಥಸಾಧನೆಗೆ ತಾನು ರಾಜಕೀಯಕ್ಕೆ ಬರಲಿಲ್ಲ, ಮಂಡ್ಯದ ಜನ (people of Mandya) ಅಂಬರೀಶ್ ಅವರ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ ಮತ್ತು ಅಭಿಮಾನ ತನ್ನನ್ನು ರಾಜಕೀಯಕ್ಕೆ ಎಳೆತಂದಿತು ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಇಡೀ ಸರ್ಕಾರವೇ ನನ್ನ ವಿರುದ್ಧ ಸೆಣಸಿದರೂ ಮಂಡ್ಯದ ಜನ ತಮ್ಮ ಕೈಬಿಡಲಿಲ್ಲ ಎಂದು ಸುಮಲತಾ ಭಾವುಕರಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.