Bagalkot: ಪಿಎಸ್ ಐ ವಿರುದ್ಧ ಸಾರ್ವಜನಿಕವಾಗಿ ಕೂಗಾಡಿ ಸೀನ್ ಸೃಷ್ಟಿಸಿದ ಜಮಖಂಡಿ ಕಾಂಗ್ರೆಸ್ ಶಾಸಕ ಅನಂದ ನ್ಯಾಮಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2023 | 2:34 PM

ಜಮಖಂಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಕೊಣ್ಣೂರ್ ಮೇಲೆ ಅದ್ಯಾಕೆ ಶಾಸಕರಿಗೆ ಅಷ್ಟು ಸಿಟ್ಟು ಅಸಮಾಧಾನವಿದೆಯೋ? ಅವರು ಪಿಎಸ್ ಐರನ್ನು ಏಕವಚನದಲ್ಲಿ ತೆಗಳಿ ನಿನ್ನ ನೋಡಿಕೊಳ್ಳುತ್ತೇನೆ ಅನ್ನುತ್ತಾ ಹೆದರಿಸುತ್ತಾರೆ.

ಬಾಗಲಕೋಟೆ: ಇದು ದರ್ಪದ ಪರಮಾವಧಿಯಲ್ಲದೆ ಮತ್ತೇನೂ ಅಲ್ಲ. ಅಧಿಕಾರದ ಮದ ತಲೆಗೇರಿದರೆ ಜನಪ್ರತಿನಿಧಿಗಳೆನಿಸಿಕೊಂಡವರು ಹೀಗೆ ಜಮಖಂಡಿ ಕಾಂಗ್ರೆಸ್ ಶಾಸಕ (Congress MLA) ಆನಂದ ನ್ಯಾಮಗೌಡರ (Anand Nyamagouda) ಹಾಗೆ ಸಾರ್ವಜಿಕವಾಗಿ ಕೂಗಾಡುತ್ತಾರೆ, ಮತ್ತು ಸರ್ಕಾರಿ ನೌಕರರ ಮೇಲೆ ಏರಿ ಹೋಗುತ್ತಾರೆ. ಜಮಖಂಡಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವರಾಜ ಕೊಣ್ಣೂರ್ (Basavaraj Konnur) ಮೇಲೆ ಅದ್ಯಾಕೆ ಅಷ್ಟು ಸಿಟ್ಟು ಅಸಮಾಧಾನವಿದೆಯೋ? ಶಾಸಕರು ಪಿಎಸ್ ಐರನ್ನು ಏಕವಚನದಲ್ಲಿ ತೆಗಳಿ ನಿನ್ನ ನೋಡಿಕೊಳ್ಳುತ್ತೇನೆ ಅನ್ನುತ್ತಾ ಹೆದರಿಸುತ್ತಾರೆ. ಒಂದು ಪಕ್ಷ ಪಿಎಸ್ ಐ ರಿಂದ ಪ್ರಮಾದವಾಗಿದ್ದರೂ ಹೀಗೆ ಬಹಿರಂಗವಾಗಿ ಕೂಗಾಡುವುದು ಯಾವ ಕನ್ನಡಿಗನಿಗೂ ಇಷ್ಟವಾಗುವುದಿಲ್ಲ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.