ಸರಕಾರ ಮುಷ್ಕರ ನಿರತರನ್ನ ಬಹಳ ಅಸಡ್ಡೆಯಿಂದ ನೋಡುತ್ತಿದೆ: ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ
ಬೀದರ್ನ ಬಸವಕಲ್ಯಾಣದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಟವಿ9ಗೆ ಹೇಳಿಕೆ. ಸಾರಿಗೆ ನೌಕರರ ಮುಷ್ಕರ ಗಂಭೀರ ವಿಷಯ. ಮುಷ್ಕರ ನಿರತರ ಜೊತೆಗೆ ಸರಕಾರ ಗಂಟೆಗೊಮ್ಮೆ ಚರ್ಚೆ ಮಾಡಬೇಕು. ಇದನ್ನ ಬಿಟ್ಟು ಬೈ ಎಲೆಕ್ಷನಲ್ಲಿ ಮುಖ್ಯಮಂತ್ರಿ, ಸಾರಿಗೆ ಸಚಿವರು ಬ್ಯುಸಿಯಾಗಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಒಂದು ಸೀಟು ಸೋತರೆ ಸರಕಾರ ಬಿದ್ದು ಹೋಗಲಿದೆಯಾ..? ಎಲ್ಲೊ ಒಂದು ಕಡೆಗೆ ಸರಕಾರ ಎಡವುತ್ತಿದೆ.
Published On - 3:28 pm, Fri, 9 April 21