ಉಡುಪಿ ಕಾಲೇಜು ವಾಷ್ ರೂಮ್ ಪ್ರಕರಣದಲ್ಲಿ ಖುಷ್ಬೂ ವಸ್ತುಸ್ಥಿತಿ ವಿವರಿಸಿದರೂ ಬಿಜೆಪಿ ರಾಜಕೀಯ ಮಾಡುತ್ತಿದೆ: ಜಗದೀಶ್ ಶೆಟ್ಟರ್

|

Updated on: Aug 04, 2023 | 12:08 PM

ಹುಬ್ಬಳ್ಳಿಯಲ್ಲಿ ಟಿವಿ ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಶೆಟ್ಟರ್ ಉಡುಪಿ ಕಾಲೇಜು ಪ್ರಕರಣದಲ್ಲಿ ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ತಮ್ಮ ಪೂರ್ವಾಶ್ರಮ ಮರೆತಿರುವ ನಾಯಕ ಅಂತ ಬಿಜೆಪಿ ನಾಯಕರು ಹೇಳಿದರೂ ಮಾಜಿ ಮುಖ್ಯಮಂತ್ರಿ ತಮ್ಮ ಹಳೆಯ ಸ್ನೇಹಿತರನ್ನು ಟೀಕಿಸುವುದು ಮುಂದುವರಿಸಿದ್ದಾರೆ. ಗುರುವಾರ ಹುಬ್ಬಳ್ಳಿಯಲ್ಲಿ ಟಿವಿ ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಶೆಟ್ಟರ್ ಉಡುಪಿ ಕಾಲೇಜು ಪ್ರಕರಣದಲ್ಲಿ (Udupi College Washroom Video) ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಹೇಳಿದರು. ಖುಷ್ಬೂ ಸುಂದರ್ (Khushboo Sundar) ಕೇವಲ ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಮಾತ್ರ ಅಲ್ಲ, ಬಿಜೆಪಿಯ ನಾಯಕಿಯೂ ಆಗಿದ್ದಾರೆ. ಅವರು ಕಾಲೇಜಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿ ವಾಷ್ ರೂಮಲ್ಲಿ ಸಿಸಿಟಿವಿ ಇರಲಿಲ್ಲ, ವಿಡಿಯೋ ಚಿತ್ರೀಕರಣ ಉದ್ದೇಶಪೂರ್ವಕವಾಗಿ ನಡೆದಿದೆ ಅನ್ನೋದಿಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ, ಫೋರೆನ್ಸಿಕ್ ವಿಭಾಗ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಸೂಕ್ಷ್ಮ ವಿಚಾರವಾಗಿರುವುದರಿಂದ ಸುಳ್ಳು ವದಂತಿಗಳನ್ನು ಹಬ್ಬಬಾರದು ಅಂತ ಹೇಳಿದರೂ ಬಿಜೆಪಿ ನಾಯಕರು ತಮಗೆ ತೋಚಿದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on