Dharwad: ಮೇವು ತುಂಬಿದ ಬಂಡಿಯನ್ನು ಮನೆವರೆಗೆ ತಳ್ಳಿಕೊಂಡು ಹೋಗಿ ರೈತ ದಂಪತಿಗೆ ನೆರವಾದ ಸಚಿವ ಸಂತೋಷ್ ಲಾಡ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2023 | 2:05 PM

 ಅಸಲಿಗೆ ಬಂಡಿಯನ್ನು ಅವರು ತಳ್ಳಿಕೊಂಡು ಓಡುತ್ತಿದ್ದಾರೆ! ಜಾಗಿಂಗೂ ಆಯ್ತು, ರೈತ ದಂಪತಿಗೆ ಸಹಾಯ ಮಾಡಿದಂಗೂ ಆಯ್ತು!

ಧಾರವಾಡ: ಇದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಸರಳತೆ ಅಂತಾದರೆ ಓಕೆ ಮಾರಾಯ್ರೇ ಅವರ ಸರಳತೆ ಮತ್ತು ಮಾನವೀಯ ಗುಣ ಮೆಚ್ಚುವಂಥದ್ದು. ಆದರೆ ಕೆಮೆರಾಗೋಸ್ಕರ ಮಾಡಿದ್ದರೆ ಇಂಥದೆಲ್ಲ ಬೇಕಿತ್ತಾ ಅಸಿಬಿಡುತ್ತದೆ. ಅಸಲು ಸಂಗತಿಯೇನೆಂದರೆ ಜಿಲ್ಲೆಯ ಕಲಘಟಗಿ (Kalghatagi) ಪಟ್ಟಣದ ಹೊರವಲಯದಲ್ಲಿರುವ ಮಡಕಿಹೊನ್ನಳ್ಳಿ ಗ್ರಾಮದ ರೈತ ದಂಪತಿ (farmer couple) ತಮ್ಮ ದನಕರುಗಳಿಗೆ ಮೇವನ್ನು ತಳ್ಳುಬಂಡಿಯಲ್ಲಿ ಹೇರಿಕೊಂಡು ಮನೆಗೆ ಹಿಂತಿರುಗುವಾಗ ಜಾಗಿಂಗ್ ಹೋಗಿದ್ದ ಸಂತೋಷ್ ಲಾಡ್ ನೋಡಿದ್ದಾರೆ. ಕೂಡಲೇ ಅವರಿಂದ ತಳ್ಳುಬಂಡಿಯನ್ನು ತೆಗೆದುಕೊಂಡು ದಂಪತಿಯ ಮನೆವರೆಗೆ ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ ತಳ್ಳಿಕೊಡು ಹೋಗಿದ್ದಾರೆ.  ಅಸಲಿಗೆ ಬಂಡಿಯನ್ನು ಅವರು ತಳ್ಳಿಕೊಂಡು ಓಡುತ್ತಿದ್ದಾರೆ! ಜಾಗಿಂಗೂ ಆಯ್ತು, ರೈತ ದಂಪತಿಗೆ ಸಹಾಯ ಮಾಡಿದಂಗೂ ಆಯ್ತು! ಪಾಪ ರೈತ, ಸಚಿವರ ಹಿಂದೆ ಏದುಸಿರು ಬಿಡುತ್ತಾ ಓಡುತ್ತಿದ್ದಾರೆ. ಅವರಿಂದ ತಪ್ಪಿಸಿಕೊಳ್ಳೋ ಹಾಗೆ ಸಚಿವ ಆಗಾಗ ತಿರುಗಿ ನೋಡುತ್ತಾ ಓಟ ಮುಂದುವರಿಸುತ್ತಾರೆ!

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.