CLP Meeting, Bengaluru: ಸಭೆಗೆ ತಡವಾಗಿ ಬಂದ ಡಿಕೆ ಶಿವಕುಮಾರ್ ಪತ್ರಕರ್ತರಿಗೆ ರಾಜೇಶ್ ಖನ್ನಾ ಶೈಲಿಯಲ್ಲಿ ಸಲ್ಯೂಟ್ ಮಾಡಿ ಒಳಗೋಡಿದರು!

|

Updated on: Jul 27, 2023 | 7:14 PM

ಸಚಿವ ಸಂಪುಟದ ಇತರ ಸದಸ್ಯರು ಮತ್ತು ಬೇರೆ ಬೇರೆ ಕ್ಷೇತ್ರಗಳ ಶಾಸಕರು ಒಳಗಡೆ ಹೋಗಿಬಿಟ್ಟಿದ್ದರು ಮತ್ತು ಸಭೆ ಅರಂಭವೂ ಆಗಿತ್ತು ಕೇವಲ ಶಿವಕುಮಾರ್ ಮಾತ್ರ ಹೊರಗುಳಿದಿದ್ದರು,

ಬೆಂಗಳೂರು: ತಡವಾಗಿ ಬಂದವರು ಓಡೋಡಿ ಬಂದರು! ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ವಿಧಾನ ಸೌಧದಲ್ಲಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ (CLP meeting) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅದ್ಯಾವುದೋ ಕಾರಣಕ್ಕೆ ವಿಧಾನ ಸೌಧ ತಲುಪುವುದು ತಡವಾಯಿತು. ಸಚಿವ ಸಂಪುಟದ ಇತರ ಸದಸ್ಯರು ಮತ್ತು ಬೇರೆ ಬೇರೆ ಕ್ಷೇತ್ರಗಳ ಶಾಸಕರು ಒಳಗಡೆ ಹೋಗಿಬಿಟ್ಟಿದ್ದರು ಮತ್ತು ಸಭೆ ಅರಂಭವೂ ಆಗಿತ್ತು. ಶಿವಕುಮಾರ್ ಅವಸರಲ್ಲಿ ನಡೆಯುತ್ತಾ ಒಳಗೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿ ನಿಂತಿದ್ದ ಮಾಧ್ಯಮದವರು ಬೈಟ್ ಗಾಗಿ ಸರ್ ಸರ್ ಅಂತ ಕೂಗುತ್ತಿದ್ದರೂ ಶಿವಕುಮಾರ್ ಮುಗುಳ್ನಗುತ್ತಾ 70ರ ದಶಕದ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಶೈಲಿಯಲ್ಲಿ ಅವರಿಗೊಂದು ಸೆಲ್ಯೂಟ್ ಮಾಡಿ, ಈಗಾಗಲೇ ತಡವಾಗಿದೆ ಎಂಬಂತೆ ಬೆಂಗಳೂರಿನ ಮೋಡ ಕವಿದ ವಾತಾವರಣದಲ್ಲಿ ಕಾಣದ ಸೂರ್ಯನೆಡೆ ಕೈ ತೋರುತ್ತಾ ಸೌಧದ ಒಳಗಡೆ ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on