Priyakrishna Vs Somanna: ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವಸತಿ ಖಾತೆ ಸಚಿವ ಸೋಮಣ್ಣ!

|

Updated on: Mar 21, 2023 | 3:11 PM

ಕ್ಷೇತ್ರದ ಉದ್ದಗಲಕ್ಕೆ ಓಡಾಡಿ ಕೆಲಸ ಮಾಡಿದ್ದೇನೆ, ಇಲ್ಲಿ ಜನ ನನ್ನನ್ನು ಗೌರವಯುತವಾಗಿ ನೋಡುತ್ತಾರೆ, ಅವರ ಶ್ರೀರಕ್ಷೆ ನನಗಿದೆ, ನನ್ನ ಸೋಲು ಗೆಲುವು ಬಗ್ಗೆ ಮಾತಾಡಲು ಪ್ರಿಯಾಕೃಷ್ಣ ಯಾರು? ಎಂದು ಸೋಮಣ್ಣ ಪ್ರಶ್ನಿಸಿದರು.

ಬೆಂಗಳೂರು: ವಸತಿ ಖಾತೆ ಸಚಿವ ವಿ ಸೋಮಣ್ಣ (V Somanna) ಅವರು ಕಾಂಗ್ರೆಸ್ ಧುರೀಣ ಎಮ್ ಕೃಷ್ಙಪ್ಙ (M Krishnappa) ಹಾಗೂ ಅವರ ಪುತ್ರ ಪ್ರಿಯಕೃಷ್ಣ (Priyakrishna) ಇಬ್ಬರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಕರೆದು ಮಾತಾಡಿದ ಸೋಮಣ್ಣ, ತಮ್ಮನ್ನು ಕುರಿತು ಮಾತಾಡುವ ಯೋಗ್ಯತೆ ಪ್ರಿಯಕೃಷ್ಣನಿಗಿಲ್ಲ, ಅವನು 10 ವರ್ಷ ಮತ್ತು ಅವನಪ್ಪ 15 ವರ್ಷಗಳ ಕಾಲ ಜನಪ್ರತಿನಿಧಿಗಳಾಗಿ ಸಾಧಿಸಿದ್ದೇನು? ಅಂತ ಖಾರವಾಗಿ ಕೇಳಿದರು. ನಾನು ಕ್ಷೇತ್ರದ ಉದ್ದಗಲಕ್ಕೆ ಓಡಾಡಿ ಕೆಲಸ ಮಾಡಿದ್ದೇನೆ, ಇಲ್ಲಿ ಜನ ನನ್ನನ್ನು ಗೌರವಯುತವಾಗಿ ನೋಡುತ್ತಾರೆ, ಅವರ ಶ್ರೀರಕ್ಷೆ ನನಗಿದೆ, ನನ್ನ ಸೋಲು ಗೆಲುವು ಬಗ್ಗೆ ಮಾತಾಡಲು ಪ್ರಿಯಾಕೃಷ್ಣ ಯಾರು? ಎಂದು ಸೋಮಣ್ಣ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on