ಕ್ರಿಕೆಟ್ ಮ್ಯಾಚ್ ಯಾವತ್ತೂ ನೋಡಲ್ಲ, ಮ್ಯಾಚ್ ಜಾರಿಯಲ್ಲಿರುವಾಗ ನ್ಯೂಸ್ ಚಾನೆಲ್ ನೋಡುತ್ತೇನೆ: ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2023 | 4:30 PM

ಮೊನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯನ್ನು ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಕ್ರಿಕೆಟ್ ಆಗಲಿ ಅಥವಾ ಬೇರೆ ಯಾವುದೇ ಕ್ಷೇತ್ರವಾಗಲೀ, ಸೂರ್ಯ ಚಂದ್ರ ಇರೋವರೆಗೆ ಭಾರತೀಯರು ಗೆಲ್ಲುತ್ತಲೇ ಇರಬೇಕು ಎಂದು ಯತ್ನಾಳ್ ಹೇಳುತ್ತಾರೆ.

ವಿಜಯಪುರ: ನಾಳೆ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಏಷ್ಯಾ ಕಪ್-2023 ಟೂರ್ನಿಯ (Asia Cup-2023 Cricket tournament) ಪಂದ್ಯ ನಡೆಯಲಿದೆ.  ಕೋಟ್ಯಾಂತರ ಭಾರತೀಯರು ನಾಳೆ ಟಿವಿಗಳ ಮುಂದೆ ಕೂತವರು ಪಂದ್ಯ ಮುಗಿಯದ ಹೊರತು ಮೇಲೇಳಲಾರರು. ಆದರೆ ವಿಜಯಪುರದ ಫೈರ್ ಬ್ರ್ಯಾಂಡ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ (Basanagouda Patil Yatnal) ಕ್ರಿಕೆಟ್ ಅಂದರೆ ಅಲರ್ಜಿಯಂತೆ. ಅವರು ಕ್ರಿಕೆಟ್ ಪಂದ್ಯಗಳನ್ನು ನೋಡೋದೆ ಇಲ್ವಂತೆ ಮಾರಾಯ್ರೇ. ಬೇರೆಯವರು ಟಿವಿ ಮುಂದೆ ಕೂತು ನೋಡುತ್ತಿದ್ದರೆ ಅವರು ಚ್ಯಾನೆಲ್ ಬದಲಾಯಿಸಿ ನ್ಯೂಸ್ ಚಾನೆಲ್ ಹಾಕ್ಕೊಳ್ಳುತ್ತಾರಂತೆ. ಓಕೆ ಸರಿ ಗೌಡ್ರೆ, ಟೀಂ ಇಂಡಿಯಾ ಏನು ಹೇಳಬಯಸುತ್ತೀರಿ ಅಂತ ಕೇಳಿದರೆ ಅಭಿಮಾನದಿಂದ, ‘ಗೆಲ್ಲಲಿ’ ಅಂತ ಹೇಳುತ್ತೇನೆ ಅನ್ನುತ್ತಾರೆ. ಮೊನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯನ್ನು ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಕ್ರಿಕೆಟ್ ಆಗಲಿ ಅಥವಾ ಬೇರೆ ಯಾವುದೇ ಕ್ಷೇತ್ರವಾಗಲೀ, ಸೂರ್ಯ ಚಂದ್ರ ಇರೋವರೆಗೆ ಭಾರತೀಯರು ಗೆಲ್ಲುತ್ತಲೇ ಇರಬೇಕು ಎಂದು ಯತ್ನಾಳ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.