ಬಿಜೆಪಿಯ ಒಬ್ಬೇಒಬ್ಬ ಕಾರ್ಯಕರ್ತ ಕಾಂಗ್ರೆಸ್ ಸೇರಲ್ಲ, ಸಿದ್ದರಾಮಯ್ಯ ಬರೀ ಬೊಗಳೆ ಬಿಡುತ್ತಾರೆ: ಮುನಿರತ್ನ ನಾಯ್ಡು, ಸಚಿವ

ಅರುಣ್​ ಕುಮಾರ್​ ಬೆಳ್ಳಿ

Updated on: Feb 20, 2023 | 2:58 PM

ಸಿದ್ದರಾಮಯ್ಯ ಅಧಿಕಾರದ್ಲಲಿದ್ದಾಗಲೇ 80 ಸೀಟು ಗೆಲ್ಲಲಾಗಲಿಲ್ಲ, ಈಗ ಅದ್ಹೇಗೆ 130 ಕ್ಕಿಂತ ಸೀಟು ಹೆಚ್ಚು ಗೆಲ್ಲುತ್ತಾರೆ? ಬೊಗಳೆ ಬಿಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಮುನಿರತ್ನ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಸಚಿವ ಮುನಿರತ್ನ ನಾಯ್ಡು (Munirathna Naidu) ತಾನು ಕಾಂಗ್ರೆಸ್ ಪಕ್ಷಕ್ಕೆ (Congress Party) ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿದು ಎಂದು ಹೇಳಿದರು. ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತ್ಯಜಿಸಿ ಬಂದ ನಾಯಕರ ಮನೆಗಳಿಗೆ ಎಡತಾಕಿ ಕಾಂಗ್ರೆಸ್ ಗೆ ಬನ್ನಿ ಅಂತ ದುಂಬಾಲು ಬಿದ್ದಿದ್ದಾರೆ ಎಂದು ಮುನಿರತ್ನ ಹೇಳಿದರು. ಬಿಜೆಪಿಯ ಒಬ್ಬ ಚಿಕ್ಕ ಕಾರ್ಯಕರ್ತ ಕೂಡ ಕಾಂಗ್ರೆಸ್ ಸೇರುವುದಿಲ್ಲ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅಧಿಕಾರದ್ಲಲಿದ್ದಾಗಲೇ 80 ಸೀಟು ಗೆಲ್ಲಲಾಗಲಿಲ್ಲ, ಈಗ ಅದ್ಹೇಗೆ 130 ಕ್ಕಿಂತ ಸೀಟು ಹೆಚ್ಚು ಗೆಲ್ಲುತ್ತಾರೆ? ಬೊಗಳೆ ಬಿಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಎಂದು ಮುನಿರತ್ನ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us