Karnataka Bandh; ನಾಡು-ಜಲ-ನೆಲದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ, ಕಾವೇರಿ ನಮ್ಮದು: ತನ್ವೀರ್ ಪಾಶಾ, ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ

Updated on: Sep 28, 2023 | 11:39 AM

Karnataka Bandh: ನಾಳೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಪಾಶಾ ಹೇಳಿದರು. ಅವರು ಹೇಳುವ ಪ್ರಕಾರ ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ.

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು (Pro Kannada organisations) ನಾಳೆ ಅಖಂಡ ಕರ್ನಾಟಕ ಬಂದ್ ಗೆ (Karnataka Bandh) ಕರೆ ನೀಡಿದ್ದು ಬಹುತೇಕ ಸೇವೆಗಳು ಸ್ತಬ್ಧಗೊಳ್ಳಲಿವೆ. ಌಪ್-ಆಧಾರಿತ ಕ್ಯಾಬ್ ಗಳು ನಾಳೆ ರಸ್ತೆಗಿಳಿಯಲ್ಲ ಎಂದು ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ರಾಜ್ಯಾಧ್ಯಕ್ಷ ತನ್ವೀರ್ ಪಾಶಾ (Tanveer Pasha ) ಹೇಳಿದ್ದಾರೆ. ನಾಳಿನ ಹೋರಾಟ ರಾಜ್ಯದ ಜೀವನದಿ ಕಾವೇರಿಯ ನೀರಿಗಾಗಿ ನಡೆಸಲಾಗುತ್ತಿದೆ, ನಾಡು-ಜಲ-ನೆಲದ ವಿಷಯ ಬಂದಾಗ ಯಾವುದೇ ರಾಜಿಯಿಲ್ಲ, ಓಲಾ-ಊಬರ್ ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಂಡು ಕಾವೇರಿ ನೀರು ನಮ್ಮದು ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಿವೆ, ನಾಳೆ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಪಾಶಾ ಹೇಳಿದರು. ಅವರು ಹೇಳುವ ಪ್ರಕಾರ ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.