Koppal News; ಬಿಜೆಪಿ ನಾಯಕರು ಬರೀ ಹಿಂದುತ್ವ ಅನ್ನುತ್ತಾ ರಾಜಕಾರಣ ಮಾಡಿದರೆ ಪ್ರಯೋಜನವಿಲ್ಲ: ಗಾಲಿ ಜನಾರ್ಧನ ರೆಡ್ಡಿ, ಶಾಸಕ

|

Updated on: Jul 27, 2023 | 5:37 PM

ದೇವರ ಸೇವೆ ಮಾಡಲು ಬೇರೆಯವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇರೋದಿಲ್ಲ. ಆ ಪ್ರೇರಣೆ ತಾನಾಗಿಯೇ ಹುಟ್ಟಬೇಕು, ಬಿಜೆಪಿ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ ಎಂದು ರೆಡ್ಡಿ ಹೇಳಿದರು.

ಕೊಪ್ಪಳ:  ಹಿಂದೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಗಾಲಿ ಜನಾರ್ಧನರೆಡ್ಡಿ (Gali Janardhan Reddy), ಆ ಪಕ್ಷದ ನಾಯಕರನ್ನು ಉಗ್ರವಾಗಿ ಟೀಕಿಸಿದರು. ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ (Anjanadri development) ರೆಡ್ಡಿ ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂಜನಾದ್ರಿ ಅಭಿವೃದ್ಧಿಯನ್ನು ಕಡೆಗಣೆಸಿದ್ದು ರೆಡ್ಡ್ಡಿಯವರಲ್ಲಿ ಬೇಸರ ಮೂಡಿಸಿದೆ. ಬರೀ ಹಿಂದುತ್ವ (Hindutva) ಅಂತ ಹೇಳಿಕೊಂಡು ತಿರುಗಿದರೆ ಪ್ರಯೋಜನವಿಲ್ಲ, ಕಳೆದ 4 ವರ್ಷಗಳ ಕಾಲ ಬಿಜೆಪಿ ಸರ್ಕಾರ ಮಾಡಿದ್ದೇನು? ದೇವರ ಸೇವೆ ಮಾಡಲು ಬೇರೆಯವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇರೋದಿಲ್ಲ. ಆ ಪ್ರೇರಣೆ ತಾನಾಗಿಯೇ ಹುಟ್ಟಬೇಕು ಎಂದು ರೆಡ್ಡಿ ಹೇಳಿದರು. ಅಂಜನಾದ್ರಿಯ ಅಭಿವೃದ್ಧಿಗೆ ತನಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಸಹಾಯ ಬೇಕು, ಅವರಿಂದ ಆಗದಿದ್ದರೆ ಖಾಸಗಿ ವ್ಯಕ್ತಿಗಳಿಂದ ಅದನ್ನು ಮಾಡಿಸುವುದಾಗಿ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on