ಹಾಸನ: ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಲಿ ನಿರ್ಧರಿಸಿರುವ ಅರಸೀಕೆರೆ ಶಾಸಕ ಕೆ ಎಮ್ ಶಿವಲಿಂಗೇಗೌಡರ (KM Shivalinge Gowda) ಕ್ಷೇತ್ರದಲ್ಲಿ ಇಂದು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡುವಾಗ ತಾವು ಕೈಗೆತ್ತಿಕೊಂಡ ಅಭಿವೃದ್ಧಿ ಕಾರ್ಯಗಳಿಗೆ ಜೆಡಿಎಸ್ ನಾಯಕರೇ (JDS leaders) ಅಡ್ಡಗಾಲು ಹಾಕಿದರು ಮತ್ತು ಆರಂಭಗೊಂಡ ಕಾಮಗಾರಿಗಳನ್ನು ನಿಲ್ಲಿಸಿದರು ಎಂದು ದೂಷಿಸಿದರು. ಜೆಡಿಎಸ್ ಬೇರೆ ನಾಯಕರು ಕ್ಷೇತ್ರಕ್ಕಾಗಿ ಅನುದಾನಗಳನ್ನು (grants) ತಂದು ಕೆಲಸ ಮಾಡಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದ ಅವರು ಕ್ಷೇತ್ರದ ಜನ ತಮ್ಮನ್ನು ಕತ್ತೆ ಕಾಯೋಕೆ ವಿಧಾನ ಸಭೆಗೆ ಕಳಿಸಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ