Karnataka Assembly Polls; ಸಚಿವ ಸುಧಾಕರ್ ಬಳಿ ಸಾಕಷ್ಟು ಸಂಪತ್ತಿದೆ ಅಂತ ಮತದಾರ ಕೈಬಿಟ್ಟರೆ ಆಶ್ಚರ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ

|

Updated on: Apr 04, 2023 | 6:08 PM

ಸುಧಾಕರ್ ಬಳಿ ಸಾಕಷ್ಟು ಸಂಪತ್ತಿದೆ ಅಂತ ಜನಕ್ಕೆ ಗೊತ್ತಾಗಿರುವುದರಿಂದ ಅವರಿಗೆ ರಾಜೀನಾಮೆ ನೀಡುವ ಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಜೆಡಿಎಸ್ ಪಕ್ಷದ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಗ್ಗೆ ಕಾಮೆಂಟ್ ಮಾಡುತ್ತಿರುವುದು ವರದಿಯಾಗುತ್ತಿವೆ. ಕುಮಾರಸ್ವಾಮಿ ಇಂದು ಬೆಂಗಳೂರಲ್ಲಿ ಸುದ್ದ್ದಿಗಾರರೊಂದಿಗೆ ಮಾತಾಡುವಾಗ ತಿರುಗೇಟು ನೀಡಿದರು. ಸುಧಾಕರ್ ಸಚಿವರಾಗಿ ಸಾಕಷ್ಟು ಸಂಪಾದನೆ ಮಾಡಿರುವಂತಿದೆ, ಜನರಿಗೆ ಫ್ರಿಡ್ಜ್, ಟಿವಿ ಮತ್ತು ಸ್ಟೌಗಳನ್ನು ನೀಡುತ್ತಿರುವುದು ಜನರಲ್ಲಿ ಅವರ ಸಂಪಾದನೆಯ ಬಗ್ಗೆ ಆಶ್ಚರ್ಯ ಮೂಡಿಸಿದೆ. ಅವರಲ್ಲಿ ಸಾಕಷ್ಟು ಸಂಪತ್ತಿದೆ (wealth) ಅಂತ ಜನಕ್ಕೆ ಗೊತ್ತಾಗಿರುವುದರಿಂದ ಶಾಸಕಾರಾಗಿ ಆಯ್ಕೆಯಾಗುವುದು ಕೂಡ ಕಷ್ಟವೆನಿಸುತ್ತಿದೆ ಮತ್ತು ಅವರಿಗೆ ರಾಜೀನಾಮೆ ನೀಡುವ ಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on