ಒಬ್ಬ ತಾಯಿಯಂತೆ ಅದಾನಿಯನ್ನು ಪೋಷಿಸಿ ಬೆಳೆಸಿದ್ದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ: ಪ್ರೊಫೆಸರ್ ಬಿಕೆ ಚಂದ್ರಶೇಖರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 04, 2023 | 4:25 PM

2001 ರಲ್ಲಿ ಗುಜರಾತಿನ ಪ್ರದೇಶವೊಂದರಲ್ಲಿ ಜಮೀನಿನ ಬೆಲೆ ಪ್ರತಿ ಚದರ ಮೀಟರ್ ಗೆ ರೂ. 10,000 ಇದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಪ್ರತಿ ಚ ಮೀಗೆ ಕೇವಲ ರೂ. 900 ಯಂತೆ ಅದಾನಿಗೆ ನೀಡಿದ್ದರು ಎಂದು ಪ್ರೊಫೆಸರ್ ಹೇಳಿದರು.

ಬೆಂಗಳೂರು: ಆರ್ಥಿಕ ತಜ್ಞ ಮತ್ತು ಮಾಜಿ ಕೇಂದ್ರ ಸಚಿವ ಪ್ರೊಫೆಸರ್ ಬಿಕೆ ಚಂದ್ರಶೇಖರ್ (Prof. BK Chandrashekhar) ಅವರು ಬಹಳ ದಿನಗಳ ಸುದ್ದಿಗೋಷ್ಟಿಯೊಂದರಲ್ಲಿ ಮಾತಾಡಿದ್ದಾರೆ. ಶನಿವಾರ ಬೆಂಗಳೂರಲ್ಲಿ ಮಾತಾಡಿದ ಚಂದ್ರಶೇಖರ್ ಅವರು ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಹುಟ್ಟುವಂತೆ ಮಾಡಿರುವ ಉದ್ಯಮಿ ಗೌತಮ್ ಅದಾನಿಯನ್ನು (Goutam Adani) ಒಬ್ಬ ತಾಯಿಯಂತೆ ಪೋಷಿಸಿ, ಕೇಳಿದ್ದನ್ನೆಲ್ಲ ನೀಡಿ ಬೆಳೆಸಿದ್ದೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಂತ ಹೇಳಿದರು. ಉದ್ಯಮ ಅಥವಾ ಉದ್ಯಮಿಯನ್ನು ಬೆಳೆಸುವುದು ತಪ್ಪಲ್ಲ, ಆದರೆ ಬೇರೆಯವರಿಗಿಂತ ಹೆಚ್ಚು ಪ್ರಾಶಸ್ತ್ಯ ನೀಡಿ ಕೇಳಿದ್ದನ್ನೆಲ್ಲ ನೀಡುವುದು, ತೆರಿಗೆ ವಿನಾಯಿತಿ ನೀಡುವುದು, ಜಮೀನನ್ನು ಅತಿ ಕಡಿಮೆ ಬೆಲೆಗೆ ಕೊಡೋದು ಸರಿಯಲ್ಲ ಎಂದು ಪ್ರೊಫೆಸರ್ ಹೇಳಿದರು. 2001 ರಲ್ಲಿ ಗುಜರಾತಿನ ಪ್ರದೇಶವೊಂದರಲ್ಲಿ ಜಮೀನಿನ ಬೆಲೆ ಪ್ರತಿ ಚದರ ಮೀಟರ್ ಗೆ ರೂ. 10,000 ಇದ್ದಾಗ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಪ್ರತಿ ಚದರ ಮೀಟರ್ ಗೆ ಕೇವಲ ರೂ. 900 ಯಂತೆ ಅದಾನಿಗೆ ನೀಡಿದ್ದರು ಎಂದು ಪ್ರೊಫೆಸರ್ ಬಿಕೆ ಚಂದ್ರಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 04, 2023 04:25 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.