PM Narendra Modi in Karnataka: ಮೆಟ್ರೋ ರೈಲಲ್ಲಿ ಬಿಎಮ್ ಆರ್ ಸಿಎಲ್ ಸಿಬ್ಬಂದಿ, ಕಾಮಗಾರಿ ನಡೆಸಿದ ಕಾರ್ಮಿಕರೊಂದಿಗೆ ಪ್ರಯಾಣಿಸಿದ ಪ್ರಧಾನಿ

|

Updated on: Mar 25, 2023 | 5:08 PM

ನಗರದಲ್ಲಿಂದು ಅವರು ಕೆಆರ್ ಪುರಂ- ವ್ಹೈಟ್ ಫೀಲ್ಡ್ಸ್ ನಡುವಿನ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ ಬಳಿಕ ಅವರು ಟ್ರೈನಲ್ಲಿ ಪ್ರಯಾಣಿಸಿದರು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕೆಲಬಾರಿ ಸಾಮಾನ್ಯ ಜನರೊಂದಿಗೆ ಬೆರೆಯಲು, ಅವರೊಂದಿಗೆ ಮಾತುಕತೆ ನಡೆಸಲು ಶಿಷ್ಟಾಚಾರವನ್ನೂ (protocol) ಬದಿಗಿಡುತ್ತಾರೆ. ನಗರದಲ್ಲಿಂದು ಅವರು ಕೆಆರ್ ಪುರಂ- ವ್ಹೈಟ್ ಫೀಲ್ಡ್ಸ್ ನಡುವಿನ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ ಬಳಿಕ ಅವರು ಟ್ರೈನಲ್ಲಿ ಪ್ರಯಾಣಿಸಿದರು. ಪ್ರಧಾನಿ ರೈಲು ಹತ್ತುವುದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೊಂದಿಗೆ ನಿಜವಾದರೂ, ಬಿಎಮ್ ಆರ್ ಸಿ ಎಲ್ ಸಿಬ್ಬಂದಿ ಹಾಗೂ ಮೆಟ್ರೊ ಕಾಮಗಾರಿಗಾಗಿ ಬೆವರು ಸುರಿಸಿರುವ ಕಾರ್ಮಿಕರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವರೊಂದಿಗೆ ಉಭಯಕುಶಲೋಪರಿ ನಡೆಸುತ್ತಾ ಪ್ರಯಾಣಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Sat, 25 March 23

Follow us on