ಧಾರವಾಡ: ಹೆಡ್ ಕಾನ್ಸ್ಟೇಬಲ್ ಒಬ್ಬರ ಕೊಳಲು ನಾದಕ್ಕೆ ಮನಸೋತು ಕೇಳುಗನೊಬ್ಬ ಕಾಲಿಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ನಡೆದಿದೆ. ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನಪರ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಳ್ನಾವರ ಠಾಣೆಯ ಹೆಡ್ ಕಾನ್ಸ್ಟೇಬಲ್ ಚಂದ್ರಕಾಂತ ಹುಟಗಿ ಸಂತ ಶಿಶುನಾಳ ಶರೀಫ್ರು ಬರೆದಂತಹ ಕೋಡಗನ ಕೋಳಿ ನುಂಗಿತ್ತ ಪದವನ್ನು ಕೊಳಲಿನಲ್ಲಿ ನುಡಿಸಿದ್ದಾರೆ. ಚಂದ್ರಕಾಂತ ಹುಟಗಿ ಅವರ ಕೊಳಲು ವಾದನ ಕೇಳುತ್ತಿದ್ದಂತೆ, ನೆರದಿದ್ದ ವ್ಯಕ್ತಿಯೊಬ್ಬ ನೇರ ವೇದಿಕೆ ಮೇಲೆ ಬಂದು ಕಾಲಿಗೆ ಬಿದ್ದಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published On - 1:26 pm, Mon, 6 March 23