Karnataka Assembly Polls; ತಾತ ಸಿದ್ದರಾಮಯ್ಯ ಜೊತೆ ಕ್ಷೇತ್ರದಲ್ಲಿ ತಿರುಗಾಡಿ ರಾಜಕಾರಣ ತಿಳಿದುಕೊಳ್ಳುವ ಆಸಕ್ತಿ ಇದೆ: ಧವನ್ ರಾಕೇಶ್

|

Updated on: Apr 19, 2023 | 11:35 AM

ಮುಂದೆ ಕಾನೂನು ವ್ಯಾಸಂಗ ಮಾಡಿ ಸಿದ್ದರಾಮಯ್ಯನವರ ಹಾಗೆ ರಾಜಕಾರಣದಲ್ಲಿ ಹೆಸರು ಮಾಡುವ ಕನಸು ತನಗಿದೆ ಎಂದು ಧವನ್ ಹೇಳಿದರು.

ಮೈಸೂರು: ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು ಅಂತ ನಮ್ಮಲ್ಲಿ ಹೇಳುತ್ತಾರೆ. ನಿನ್ನೆ ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಿದ್ದರಾಮಯ್ಯ (Siddaramaiah) ತಮ್ಮೊಂದಿಗೆ ಪ್ರಚಾರಕ್ಕೆ ಬಂದಿದ್ದ ಮೊಮ್ಮಗ ಧವನ್ ರಾಕೇಶ್ (Dhawan Rakesh) ಬಗ್ಗೆ ಮಾತಾಡಿದ್ದರು. ಪಿಯುಸಿ ವ್ಯಾಸಂಗ ಮಾಡುತ್ತಿರುವ ಧವನ್ ಜೊತೆ ಇಂದು ಸಿದ್ದರಾಮನಹುಂಡಿಯಲ್ಲಿ ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ಮಾತಾಡಿದ್ದಾರೆ. ತನಗೆ ರಾಜಕೀಯದಲ್ಲಿ ಬಹಳ ಆಸಕ್ತಿ ಇದೆ. ನಾಮಪತ್ರಿಕೆ ಸಲ್ಲಿಕೆ, ಚುನಾವಣಾ ಪ್ರಚಾರ (campaigning) ಮೊದಲಾದವುಗಳ ಬಗ್ಗೆ ಬಹಳ ಕುತೂಹಲ ಇರೋದ್ರಿಂದ ಅವುಗಳನ್ನು ತಿಳಿದುಕೊಳ್ಳಲು ತಾತನ ಜೊತೆ ಓಡಾಡುತ್ತಿರುವುದಾಗಿ ಧವನ್ ಹೇಳಿದರು. ಮುಂದೆ ಕಾನೂನು ವ್ಯಾಸಂಗ ಮಾಡಿ ಸಿದ್ದರಾಮಯ್ಯನವರ ಹಾಗೆ ರಾಜಕಾರಣದಲ್ಲಿ ಹೆಸರು ಮಾಡುವ ಕನಸು ತನಗಿದೆ ಎಂದು ಧವನ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on