ಶಾಸಕ ಅಬ್ಬಯ್ಯ ಪ್ರಸಾದ್ ಗೆ ನಿಗಮ/ಮಂಡಳಿ ಅಧ್ಯಕ್ಷ ಸ್ಥಾನ ಕೋರಿ ಬೆಂಬಲಿಗರಿಂದ ಡಿಕೆ ಶಿವಕುಮಾರ್ ಮನೆಮುಂದೆ ಪ್ರದರ್ಶನ

Updated on: Oct 17, 2023 | 1:02 PM

ಪ್ರದರ್ಶನಕಾರರನ್ನು ತಮ್ಮ ಮನೆಯ ಬಾಲ್ಕನಿಯಿಂದ ನೋಡಿ ಮುಗುಳ್ನಕ್ಕು ಕೈ ಬೀಸುವ ಶಿವಕುಮಾರ್ ನಂತರ ಕೆಳಗಿಳಿದು ಬಂದು ಮನವಿ ಪತ್ರ ಸ್ವೀಕರಿಸುತ್ತಾರೆ. ಶಿವಕುಮಾರ್ ಕಾಣುತ್ತಲೇ ಅವರೆಲ್ಲ ಡಿಕೆ ಸಾಹೇಬರಿಗೆ ಜಯವಾಗಲಿ ಅಂತ ಕೂಗುತ್ತಾರೆ ಮತ್ತು ಒಕ್ಕೊರಲಿನಿಂದ ಡಿಕೆ ಡಿಕೆ ಅನ್ನುತ್ತಾರೆ. ಅಬ್ಬಯ್ಯ ಕೂಡ ಗುಂಪಿನಲ್ಲಿರುವುದನ್ನು ನೋಡಬಹುದು.

ಬೆಂಗಳೂರು: ಹುಬ್ಬಳ್ಳಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಗೆ (Prasad Abbayya) ಒಂದು ಉತ್ತಮ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಇಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿವಾಸದ ಬಳಿ ಪ್ರದರ್ಶನ ನಡೆಸಿದರು. ನಿಮಗೆ ನೆನಪಿರಬಹುದು, ಮೇನಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗುವಾಗಲೂ ಅಬ್ಬಯ್ಯ ಬೆಂಬಲಿಗರು ಸಚಿವ ಸ್ಥಾನ ನೀಡಬೇಕೆಂದು ಪ್ರದರ್ಶನ ನಡೆಸಿದ್ದರು. ಅಬ್ಬಯ್ಯ ಬೆಂಬಲಿಗರೆಲ್ಲ, ಕರ್ನಾಟಕ ರಾಜ್ಯ ಛಲವಾದಿ ಮಹಸಭಾ ರಾಯಚೂರಿನ ಸದಸ್ಯರೂ ಆಗಿದ್ದಾರೆ. ಅವರ ಕೈಗಳಲ್ಲಿ ಮಹಾಸಭಾದ ಪ್ಲಕಾರ್ಡ್ ನೋಡಬಹುದು. ಪ್ರದರ್ಶನಕಾರರನ್ನು ತಮ್ಮ ಮನೆಯ ಬಾಲ್ಕನಿಯಿಂದ ನೋಡಿ ಮುಗುಳ್ನಕ್ಕು ಕೈ ಬೀಸುವ ಶಿವಕುಮಾರ್ ನಂತರ ಕೆಳಗಿಳಿದು ಬಂದು ಮನವಿ ಪತ್ರ ಸ್ವೀಕರಿಸುತ್ತಾರೆ. ಶಿವಕುಮಾರ್ ಕಾಣುತ್ತಲೇ ಅವರೆಲ್ಲ ಡಿಕೆ ಸಾಹೇಬರಿಗೆ ಜಯವಾಗಲಿ ಅಂತ ಕೂಗುತ್ತಾರೆ ಮತ್ತು ಒಕ್ಕೊರಲಿನಿಂದ ಡಿಕೆ ಡಿಕೆ ಅನ್ನುತ್ತಾರೆ. ಅಬ್ಬಯ್ಯ ಕೂಡ ಗುಂಪಿನಲ್ಲಿರುವುದನ್ನು ನೋಡಬಹುದು. ಅಬ್ಬಯ್ಯಗೆ ಆಶ್ವಾಸನೆ ನೀಡಿ ಶಿವಕುಮಾರ್ ವಾಪಸ್ಸು ಹೋಗುವಾಗ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅಲ್ಲಿಗೆ ಆಗಮಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More