Karnataka Assembly Polls; ಸ್ವರೂಪ್ ಕೂಡ ನನ್ನ ಮಗ, ಅವನನ್ನು ಹಾಸನ ಮತದಾರರು ಗೆಲ್ಲಿಸಲೇಬೇಕು: ಭವಾನಿ ರೇವಣ್ಣ

|

Updated on: Apr 19, 2023 | 4:34 PM

ತಮಗಾದ ನಿರಾಶೆ, ಹತಾಷೆ ಮತ್ತು ನೋವನ್ನು ಬದಿಗೊತ್ತಿ ಭವಾನಿ ಪ್ರಚಾರಕ್ಕಿಳಿದಿದ್ದಾರೆ. ಇಂದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಭರ್ಜರಿಯಾಗಿ ಪ್ರಚಾರ ನಡೆಸಿದರು

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭಗೀರಥ ಪ್ರಯತ್ನ ನಡೆಸಿ ಕೊನೆಗೂ ಅದು ಸಿಗದೆ ಹೋದಾಗ ತೀವ್ರ ನಿರಾಶರಾದ ಭವಾನಿ ರೇವಣ್ಣ (Bhavani Revanna) ಪಕ್ಷದ ಅಭ್ಯರ್ಥಿಗಳ ಪರ ಅದರಲ್ಲೂ ವಿಶೇಷವಾಗಿ ಹಾಸನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲಾರರು ಎಂದು ಜನ ಭಾವಿಸಿದ್ದರು. ಅದರೆ, ತಮಗಾದ ನಿರಾಶೆ, ಹತಾಷೆ ಮತ್ತು ನೋವನ್ನು ಬದಿಗೊತ್ತಿ ಭವಾನಿ ಪ್ರಚಾರಕ್ಕಿಳಿದಿದ್ದಾರೆ. ಇಂದು ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ (Swaroop Prakash) ಭರ್ಜರಿಯಾಗಿ ಪ್ರಚಾರ ನಡೆಸಿದರು. ಅವರ ಪ್ರತಿಮಾತಿಗೆ ನೆರೆದ ಜನರಿಂದ ಶಿಳ್ಳೆ, ಚಪ್ಪಾಳೆ. ಸ್ವರೂಪ್ ತಮಗೆ ಮತ್ತೊಬ್ಬ ಮಗನಿದ್ದಂತೆ, ಅವರನ್ನು ನೀವೆಲ್ಲ ಗೆಲ್ಲಿಸಲೇಬೇಕು ಅಂತ ಭವಾನಿ ಹೇಳಿದಾರ ಕೊಂಚ ದೂರದಲ್ಲಿದ್ದ ಸ್ವರೂಪ್ ಓಡಿಬಂದು ಭವಾನಿಯವರ ಪಾದ ಮುಟ್ಟಿ ನಮಸ್ಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on