ಬೆಂಗಳೂರು: ವಿಧಾನ ಸಭೆಯಲ್ಲಿ ಇಂದು ಸದನದ ಬಾವಿ ಮತ್ತು ಸಭಾಧ್ಯಕ್ಷರ ಪೀಠದ ಬಳಿಗೆ ನುಗ್ಗಿ ಪೇಪರ್ ಗಳನ್ನು ಹರಿದು ಆಗ ಪೀಠದಲ್ಲಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ (Rudrappa Lamani) ಅವರ ಮೇಲೆ ಎಸೆದು ದಾಂಧಲೆ ನಡೆಸಿದ ಬಿಜೆಪಿಯ 10 ಶಾಸಕರನ್ನು ಬಜೆಟ್ ಅಧಿವೇಶನ (Budget Session) ಮುಗಿಯುವವರೆಗೆ ಸದನದಿಂದ ಸಸ್ಪೆಂಡ್ ಮಾಡಲಾಯಿತು. ಡಾ ಸಿಎನ್ ಅಶ್ವಥ್ ನಾರಾಯಣ, ವೇದವ್ಯಾಸ ಕಾಮತ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಅರವಿಂದ ಬೆಲ್ಲದ್, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ, ಭರತ್ ಶೆಟ್ಟಿ-ಇವರನ್ನು ಅಧಿವೇಶನ ಮುಗಿಯುವರೆಗೆ ಸಸ್ಪೆಂಡ್ ಮಾಡಲಾಗಿದೆ. ಅದಕ್ಕೂ ಮೊದಲು ಸಭಾಪತಿ ಯುಟಿ ಖಾದರ್; ಪೀಠಕ್ಕೆ, ಸದನಕ್ಕೆ ಅಗೌರವ ಉಂಟಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ, ಇಂಥ ದುರ್ವರ್ತನೆ ಸದನ ಯಾವತ್ತೂ ಸಹಿಸುವುದಿಲ್ಲ ಅಂತ ಹೇಳಿ 10 ಸದಸ್ಯರನ್ನು ಹೆಸರಿದರು. ಬಳಿಕ ಕಾನೂನು ಮತ್ತ ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ (HK Patil) ಸದಸ್ಯರ ಹೆಸರುಗಳನ್ನು ಓದಿ ಅವರೆಲ್ಲ ಸದನದಲ್ಲಿ ಅಸಭ್ಯ ಮತ್ತು ಪೀಠಕ್ಕೆ ಅಗೌರವ ಉಂಟಾಗುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿ 348 ರ ಮೇರೆಗೆ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಬೇಕೆಂದು ಪ್ರಸ್ತಾವ ಮಂಡಿಸಿದರು. ಅದಾದ ಮೇಲೆ ಸಭಾಧ್ಯಕ್ಷರು ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ