Heavy rain batters Bengaluru: ರಾತ್ರಿ ಸುರಿದ ಮಳೆಗೆ ಸ್ನೇಹಿತನ ಮನೆಯಲ್ಲಿ ಬಿಟ್ಟಿದ್ದ ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರು ಜಲಾವೃತ!

ಅರುಣ್​ ಕುಮಾರ್​ ಬೆಳ್ಳಿ

Updated on: May 22, 2023 | 10:28 AM

ಪಂಪ್ ಸೆಟ್ ಮೂಲಕ ನೀರನ್ನು ಹೊರಹಾಕಿದ ಬಳಿಕವೇ ಸೆಲ್ಲರ್ ನಲ್ಲಿ ಜಲಾವೃತಗೊಂಡಿದ್ದ ಕಾರುಗಳನ್ನು ಕಂಡಿವೆ.

ಬೆಂಗಳೂರು: ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆ ಭಾರೀ ಪ್ರಮಾಣದ ಅವಾಂತರಗಳನ್ನು ಸೃಷ್ಟಿಸಿರೋದನ್ನು ನೀವು ಟಿವಿ ಪರದೆಗಳ ಮೇಲೆ ನೋಡುತ್ತಿರುತ್ತೀರಿ ಇಲ್ಲವೇ ಖುದ್ದು ಕಷ್ಟ ಅನುಭವಿಸಿರಬಹುದು. ಧಾರಾಕಾರವಾಗಿ ಸುರಿದ ಮಳೆ ರಾಜ್ಯಸಭಾ ಸದಸ್ಯ (Rajya Sabha member) ಮತ್ತು ನಟ ಜಗ್ಗೇಶ್ (Jaggesh) ಅವರ ಕಾರನ್ನೂ ಬಿಟ್ಟಿಲ್ಲ. ಕಾರಿನ ರಪೇರಿ ಕೆಲಸದ ಹಿನ್ನೆಲೆ ಜಗ್ಗೇಶ್ ತಮ್ಮ ಐಷಾರಾಮಿ ಕಾರನ್ನು (expensive car ) ಸ್ನೇಹಿತ ಮನೆಯಲ್ಲಿ ಬಿಟ್ಟಿದ್ದರಂತೆ. ಮಳೆ ನೀರು ಸ್ನೇಹಿತ ವಾಸವಾಗಿರುವ ಮನೆಯ ಸೆಲ್ಲರ್ ನಲ್ಲಿ ನುಗ್ಗಿದ್ದರಿಂದ ಅವರ ಕಾರು ಸಂಪೂರ್ಣವಾಗಿ ಮುಳುಗಡೆಯಾಗಿತ್ತಂತೆ. ಪಂಪ್ ಸೆಟ್ ಮೂಲಕ ನೀರನ್ನು ಹೊರಹಾಕಿದ ಬಳಿಕವೇ ಸೆಲ್ಲರ್ ನಲ್ಲಿ ಜಲಾವೃತಗೊಂಡಿದ್ದ ಕಾರುಗಳನ್ನು ಕಂಡಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.