ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜೊತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜೊತೆಗೂಡಿದರು!

|

Updated on: Aug 23, 2023 | 1:22 PM

ಬೊಮ್ಮಾಯಿ ಅವರನ್ನು ನೋಡುವ ಶಿವಕುಮಾರ್ ಎದ್ದು ನಿಂತು ಕೈ ಕುಲುಕುತ್ತಾರೆ. ನಂತರ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅಲ್ಲಿಗೆ ಆಗಮಿಸುತ್ತಾರೆ. ಈ ಬಾರಿ ಸಿದ್ದರಾಮಯ್ಯ ಸಹ ಎದ್ದು ನಿಂತು, ಏನು ಗೌಡರೇ ಹೇಗಿದ್ದೀರಿ, ಚೆನ್ನಾಗಿದ್ದೀರಾ ಅಂತ ಉಭಯಕುಶಲೋಪರಿ ನಡೆಸುತ್ತಾರೆ.

ಬೆಂಗಳೂರು: ತಮಿಳುನಾಡುಗೆ ಕಾವೇರಿ ನದಿ ಹರಿಬಿಡುತ್ತಿರುವದರಿಂದ ಎದುರಾಗುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆದಿರುವ ಸರ್ವಪಕ್ಷ ಸಭೆಗೆ ಎಲ್ಲ ಪಕ್ಷಗಳ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡರು. ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಸಭೆಗೆ ಮೊದಲು ಕೊನೆ ನಿಮಿಷದ ತಯಾರಿಯಲ್ಲಿ ತೊಡಗಿದ್ದಾಗ ಅವರ ಹಿಂದಿನಿಂದ ಆಗಮಿಸುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ (Basavaraj Bommai) ಸಿದ್ದರಾಮಯ್ಯಗೆ ವಿಶ್ ಮಾಡುತ್ತಾರೆ. ಸಿದ್ದರಾಮಯ್ಯ ಅವೆರೆಡೆ ತಿರುಗಿ ಏನ್ ಬಸಣ್ಣಾ ಅನ್ನುತ್ತಾ ಕೈಕುಲುಕುತ್ತಾರೆ. ಬೊಮ್ಮಾಯಿ ಅವರನ್ನು ನೋಡುವ ಶಿವಕುಮಾರ್ ಎದ್ದು ನಿಂತು ಕೈ ಕುಲುಕುತ್ತಾರೆ. ನಂತರ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಡಿವಿ ಸದಾನಂದ ಗೌಡ (DV Sadananda Gowda) ಅಲ್ಲಿಗೆ ಆಗಮಿಸುತ್ತಾರೆ. ಈ ಬಾರಿ ಸಿದ್ದರಾಮಯ್ಯ ಸಹ ಎದ್ದು ನಿಂತು, ಏನು ಗೌಡರೇ ಹೇಗಿದ್ದೀರಿ, ಚೆನ್ನಾಗಿದ್ದೀರಾ ಅಂತ ಉಭಯಕುಶಲೋಪರಿ ನಡೆಸುತ್ತಾರೆ.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Wed, 23 August 23

Follow us on