ದೆಹಲಿ: ಸಂಸತ್ ಭವನದಲ್ಲಿ ನಿನ್ನೆ ನಡೆದ ಭದ್ರತಾ ಲೋಪ ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಭವನ ಪ್ರವೇಶಿಸಿದ ಯುವಕರು ಬಿಜೆಪಿ ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ಸಹಿಯ ವಿಸಿಟರ್ ಪಾಸು ಪಡೆದ ಕಾರಣ ಎಲ್ಲ ಕೋನಗಳಿಂದ ಸಮಗ್ರ ತನಿಖೆ (comprehensive investigation) ಆಗಬೇಕು ಅಂತ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಹ ತಮ್ಮ ಸರ್ಕಾರ ಘಟನೆಯ ಸಮಗ್ರ ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಿದರು. ಯುವಕರು ಸಂಸತ್ ಭವನ ಪ್ರವೇಶಿಸುವುದು ಸಾಧ್ಯವಾಗಿದ್ದು ಹೇಗೆ ಅವರ ಉದ್ದೇಶ ಏನಾಗಿತ್ತು ಮೊದಲಾದ ಎಲ್ಲ ಸಂಗತಿಗಳ ಸಮಗ್ರ ಚರ್ಚೆಯಾಗಬೇಕು ಅಂತ ತಾವೆಲ್ಲ ಒತ್ತಾಯಿಸಿದ್ದು, ತನಿಖೆ ನಡೆಸಿ ವರದಿಯನ್ನು ಸದನ ಮುಂದಿಡುವುದಾಗಿ ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ ಎಂದು ಹೇಳಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು ಅನ್ನೋದು ತಮ್ಮ ಆಗ್ರಹವಾಗಿದೆ ಎಂದು ಸಚಿವೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ