ದೇವರಿಗೆ ಬಾಳೆಹಣ್ಣು ತೆಂಗಿನಕಾಯಿ ಅರ್ಪಿಸುವುದೇಕೆ? ಇದರ ಮಹತ್ವವೇನು?

ಆಯೇಷಾ ಬಾನು

Updated on: May 23, 2024 | 7:01 AM

ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಪವಿತ್ರ ಎಂದು ಪರಿಗಣಿಸಲ್ಪಟ್ಟಿವೆ. ಇತರೆ ಫಲಗಳು ಬೀಜ ನೆಟ್ಟಿ ಬೆಳೆಯುವಂತವು, ಆದ್ರೆ ತೆಂಗಿನಕಾಯಿ, ಬಾಳೆಹಣ್ಣುಗಳು ಆ ರೀತಿ ಅಲ್ಲ. ಇವುಗಳಿಂದ ಭಕ್ತರ ಮನದ ಅಪೇಕ್ಷೆಗಳೂ ನೆರವೇರುವುದು ಖಂಡಿತ ಎಂಬ ಭಾವನೆ ಇದೆ. ಆದ್ದರಿಂದಲೇ ಈ ಎರಡನ್ನೂ ಜನ ತಪ್ಪಿಸದೇ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಸಾಮಾನ್ಯವಾಗಿ ನಾವೆಲ್ಲ ದೇವರ ದರ್ಶನಕ್ಕೆ ಹೋಗುವಾಗ ತೆಂಗಿನಕಾಯಿ, ಬಾಳೆಹಣ್ಣು, ಹೂವನ್ನು ತೆಗೆದುಕೊಂಡು ಹೋಗುತ್ತೇವೆ. ಆದರೆ ಕಲ್ಪ ವೃಕ್ಷ ತೆಂಗಿನಕಾಯಿ, ಬಾಳೆಹಣ್ಣನ್ನೇ ಏಕೆ ಅರ್ಪಿಸಬೇಕು ಎಂದು ಎಂದಾದರು ಯೋಜಿಸಿದ್ದೀರಾ? ಬನ್ನಿ ಇಂದು ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ಬಗ್ಗೆ ವಿವರಿಸಿದ್ದಾರೆ.

ತೆಂಗಿನಕಾಯಿ, ಬಾಳೆಹಣ್ಣು ಇವೆರಡೂ ಪೂರ್ತಿ ಫಲಗಳು. ಹೀಗಾಗಿ ಇವುಗಳನ್ನು ಪವಿತ್ರ ಎನ್ನಲಾಗುತ್ತೆ. ಇವುಗಳಿಂದ ಭಕ್ತರ ಮನದ ಅಪೇಕ್ಷೆಗಳೂ ನೆರವೇರುವುದು ಖಂಡಿತ ಎಂಬ ಭಾವನೆ ಇದೆ. ಭೂಮಿಯಲ್ಲಿ ಬೆಳೆವ ಎಲ್ಲಾ ಗಿಡದ ಹಣ್ಣುಗಳೂ ಪಶು-ಪಕ್ಷಿಗಳು ಅಥವಾ ಮನುಷ್ಯರು ತಿಂದು ಎಸೆದ ಬೀಜದಿಂದ ಅಥವಾ ಹಕ್ಕಿಗಳ ಹಿಕ್ಕೆಯಿಂದ ಬೆಳೆಯುತ್ತವೆ. ಹೀಗಾಗಿ ಈ ಗಿಡ-ಮರಗಳು ಎಂಜಲಿನಿಂದ ಬೆಳೆದಂತಾಯಿತು. ಇವು ದೇವರಿಗೆ ಅರ್ಪಿಸಲು ನಿಷಿದ್ಧ. ಅಂದರೆ ಇವು ಅಪವಿತ್ರವಾದವು. ಆದರೆ, ತೆಂಗಿನಕಾಯಿ ಮತ್ತು ಬಾಳೆಹಣ್ಣು ಈ ರೀತಿ ಅಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.