Assembly Polls: ಸಿದ್ದರಾಮಯ್ಯ ಅಂತಿಮವಾಗಿ ವರುಣಾದಿಂದಲೇ ಸ್ಪರ್ಧಿಸೋದು ಅಂತ ಮೊದಲೇ ಹೇಳಿದ್ದೆವು: ಸಿಟಿ ರವಿ
ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕನಿಗೆ ರಾಜ್ಯದಲ್ಲಿ ಒಂದು ಸುರಕ್ಷಿತ ಕ್ಷೇತ್ರವಿಲ್ಲ ಅಂತಾದ್ರೆ ಆ ಪಕ್ಷ ಗೆಲ್ಲುವುದು ಸಾಧ್ಯವೇ ಎಂದು ರವಿ ಪ್ರಶ್ನಿಸಿದರು.
ದಾವಣಗೆರೆ: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದಲ್ಲಿ ಭಾಗಿಯಾಗಿದ್ದ ಚಿಕ್ಕಮಗಳೂರು ಶಾಸಕ ಸಿಟಿ ರವಿ (CT Ravi) ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕಸ ಸಿದ್ದರಾಮಯ್ಯನವರಿಗೆ (Siddaramaiah) ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ವಿನಾಕಾರಣ ಬೇರೆ ಬೇರೆ ಕ್ಷೇತ್ರಗಳ ಹೆಸರುಗಳನ್ನು ತೇಲಿಬಿಡುತ್ತಿದ್ದಾರೆ, ಅವರು ವರುಣಾದಿಂದಲೇ ಸ್ಪರ್ಧಿಸುವುದು ನಿಶ್ಚಿತ ಎಂದು ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ತಾನು ಆಗಾಗ ಹೇಳಿದ್ದು ನಿಜವಾಗಿದೆ. ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕನಿಗೆ ರಾಜ್ಯದಲ್ಲಿ ಒಂದು ಸುರಕ್ಷಿತ ಕ್ಷೇತ್ರವಿಲ್ಲ ಅಂತಾದ್ರೆ ಆ ಪಕ್ಷ ಗೆಲ್ಲುವುದು ಸಾಧ್ಯವೇ ಎಂದು ರವಿ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us